ಕರ್ನಾಟಕ

ಮಗು ಕದ್ದದ್ದು ಪೊಲೀಸನ ಹೆಂಡತಿ!

Pinterest LinkedIn Tumblr

Police

ಬಾಗಲಕೋಟೆ: ಇಲ್ಲಿನ ಜಿಲ್ಲಾ ಆಸ್ಪತ್ರೆ­ಯಲ್ಲಿ ನಡೆದಿದ್ದ ಗಂಡು ಮಗು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿ­ದ್ದಾರೆ. ಮುಖ್ಯ ಆರೋಪಿ ಗಾಯತ್ರಿ ಎಂಬಾ­ಕೆಯು ಬಾಗಲಕೋಟೆ ಜಿಲ್ಲೆಯ ಪೊಲೀಸ್‌ ಠಾಣೆಯೊಂದ­ರಲ್ಲಿ ಕಾರ್ಯ­ನಿರ್ವ­ಹಿ­ಸುತ್ತಿರುವ ಪೊಲೀಸ್‌ ಕಾನ್‌­ಸ್ಟೆಬಲ್‌ ಪತ್ನಿ ಎಂದು ತಿಳಿದು­ಬಂದಿದೆ.

ಮಗುವಿನ ಅಪಹರಣಕ್ಕೆ ಸಹಕ­ರಿ­ಸಿದ್ದ ಆಕೆ ಪ್ರಿಯಕರ ಬಸವನಬಾಗೇ­ವಾ­ಡಿಯ ಕೃಷ್ಣ ತುಕಾರಾಮ ಜಗ­ದಾಳೆ ಎಂಬಾ­ತನನ್ನೂ ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿ­ಕೊಂಡಿ­ದ್ದಾ­ರೆ. ಆರೋಪಿ ಮತ್ತು ಆಕೆಯ ಪತಿ (ಪೊಲೀಸ್‌) ದಾಂಪತ್ಯದಲ್ಲಿ
ಬಿರುಕು ಉಂಟಾಗಿ ವಿವಾಹ ವಿಚ್ಛೇದನಕ್ಕಾಗಿ ಈಗಾಗಲೇ ಅರ್ಜಿ ಸಲ್ಲಿಸಿದ್ದು, ವಿಚಾ­ರಣೆ ಹಂತದಲ್ಲಿದೆ. ಆಕೆ ಪತಿಯಿಂದ ದೂರವಾಗಿ­ದ್ದಾಳೆ ಎಂದು ಪೊಲೀಸ್‌ ಅಧಿಕಾರಿ­ಯೊಬ್ಬರು ಖಚಿತಪಡಿಸಿದ್ದಾರೆ. ಆಕೆಯ ಪತಿ ನೀಡಿದ ಖಚಿತ ಮಾಹಿತಿ ಆಧರಿಸಿಯೇ ಮಗುವನ್ನು ರಕ್ಷಿಸಲಾ­ಯಿತು ಎಂದು ಪೊಲೀಸ್‌ ಮೂಲ­ಗಳಿಂದ ತಿಳಿದುಬಂದಿದೆ.

ಡಿಎನ್‌ಎ ಪರೀಕ್ಷೆ: ಆರೋಪಿಗಳಿಂದ ವಶಪಡಿಸಿಕೊಂಡಿರುವ ಮಗು ಜಿಲ್ಲಾ ಆಸ್ಪತ್ರೆಯಿಂದ ಕಳುವಾಗಿದ್ದ ಮಗುವೇ ಎಂಬುದು ದೃಢಪಟ್ಟಿದ್ದರೂ ಖಚಿತ­ಪಡಿಸಿ­ಕೊಳ್ಳುವ ಉದ್ದೇಶದಿಂದ ಮಗು­ವನ್ನು ಡಿಎನ್ಎ ಪರೀಕ್ಷೆಗೆ ಒಳ­ಪಡಿಸಲಾಗುವುದು ಎಂದು ಡಿವೈ­ಎಸ್‌ಪಿ ವಿಠಲ ಜಗಲಿ ‘ಪ್ರಜಾ­ವಾಣಿ’ಗೆ ತಿಳಿಸಿದರು.

Write A Comment