ಉಡುಪಿ : ಕ.ರಾ.ರ.ಸಾ.ನಿಗಮವು ಮಂಗಳೂರು ವಿಭಾಗದಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಂಗಳೂರು-ಬಳ್ಳಾರಿ-ಮಂಗಳೂರು ಮಾರ್ಗದಲ್ಲಿ ರಾಜಹಂಸ ಹೊಸ ವಾಹನಗಳೊಂದಿಗೆ ಸಾರಿಗೆಯನ್ನು ಕಾರ್ಯಾಚರಿಸಲಾಗುತ್ತಿದ್ದು, ಸದರಿ ಸಾರಿಗೆಗಳ ಕಾರ್ಯಾಚರಣೆ ಸಮಯ ಹಾಗೂ ಪ್ರಯಾಣ ದರದ ವಿವರ ಈ ಕೆಳಗಿನಂತಿದೆ.
(ಸಾಂದರ್ಭಿಕ ಚಿತ್ರ)
ಮಂಗಳೂರು-ಬಳ್ಳಾರಿ : ಮಂಗಳೂರು ಬಸ್ಸು ನಿಲ್ದಾಣದಿಂದ ಸಂಜೆ 7.00 ಗಂಟೆಗೆ ಹೊರಟು ಉಡುಪಿ 8.40, ಕುಂದಾಪುರ 9.30, ತೀರ್ಥಹಳ್ಳಿ, ಶಿವಮೊಗ್ಗ 01.15-01.35, ಚನ್ನಗಿರಿ, ಹೊಳಲ್ಕೆರೆ, ಚಿತ್ರದುರ್ಗ 4.00, ಮಾರ್ಗವಾಗಿ ಕಾರ್ಯಾಚರಣೆಗೊಂಡು ಬಳ್ಳಾರಿಯನ್ನು ಬೆಳಗ್ಗೆ 06.30 ಕ್ಕೆ ತಲುಪುವುದು.
ಬಳ್ಳಾರಿ-ಮಂಗಳೂರು : ಬಳ್ಳಾರಿಯಿಂದ ಸಂಜೆ 05.35 ಕ್ಕೆ ಹೊರಟು ಚಿತ್ರದುರ್ಗ 08.25-9.00, ಶಿವಮೊಗ್ಗದಿಂದ ರಾತ್ರಿ 11.30 ಕ್ಕೆ ನಿರ್ಗಮಿಸಿ ಹಿಂದಕ್ಕೆ ಕಾರ್ಯಾಚರಣೆಗೊಂಡು ಮಂಗಳೂರನ್ನು ಬೆಳಗ್ಗೆ 05.00 ಗಂಟೆಗೆ ತಲುಪುವುದು.
ಪ್ರಯಾಣ ದರ ವಿವರ: ಮಂಗಳೂರಿನಿಂದ ಬಳ್ಳಾರಿಗೆ ಒಟ್ಟು ಪ್ರಯಾಣ ದರ 600 ರೂ., ಮಂಗಳೂರಿನಿಂದ ಚಿತ್ರದುರ್ಗಕ್ಕೆ ಒಟ್ಟು ಪ್ರಯಾಣ ದರ 500 ರೂ., ಮಂಗಳೂರಿನಿಂದ ಶಿವಮೊಗ್ಗಕ್ಕೆ ಒಟ್ಟು ಪ್ರಯಾಣ ದರ 370 ರೂ.ಗಳು.
ಸದರಿ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದ್ದು, ಸಾರ್ವಜನಿಕರು ಸದರಿ ಸಾರಿಗೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.