ಕರಾವಳಿ

ಎಟಿಎಂನಲ್ಲಿ ಸಿಕ್ಕ ಹಣ ವಾಪಾಸ್ ನೀಡಿ ಪ್ರಾಮಾಣಿಕತೆ ಮೆರೆದ ಯುವಕ

Pinterest LinkedIn Tumblr

ಕುಂದಾಪುರ: ಇಲ್ಲಿನ ಬ್ಯಾಂಕ್ ಎಟಿಎಂ ಕೇಂದ್ರವೊಂದರಲ್ಲಿ ತಾಂತ್ರಿಕ ದೋಷದಿಂದ ಯಾರೋ ತೆಗೆದ ಹಣ ಎಟಿಎಂ ಯಂತ್ರದಲ್ಲಿ ಸಿಕ್ಕಿ ಕೊಂಡಿದ್ದು ಅದೇ ಸಮಯಕ್ಕೆ ಹಣ ತೆಗೆಯಲು ಬಂದ ಕುಂದಾಪುರ ಮದ್ದುಗುಡ್ಡೆ ನಿವಾಸಿ ಕಿರಣ್ ಪೂಜಾರಿ ಎಟಿಎಂನಲ್ಲಿ ಸಿಕ್ಕಿ ಕೊಂಡಿರುವ ಹಣವನ್ನು ಕಂಡು ಪೊಲೀಸರ ಮೂಲಕ ಸಂಬಂದಪಟ್ಟವರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

( ಕಿರಣ್ ಪೂಜಾರಿ)

 

ಕುಂದಾಪುರದ ಕಾರ್ಪೋರೇಶನ್ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಮಂಗಳವಾರದಂದು ವ್ಯಕ್ತಿಯೊಬ್ಬರು ಹಣ ತೆಗೆಯಲು ಬಂದಿದ್ದು ಎರಡು ಸಾವಿರ ಹಣ ವಿತ್ ಡ್ರಾ ಮಾಡಿದ್ದರು. ಆದರೆ ಎಟಿಎಂ ತಾಂತ್ರಿಕ ದೋಷದಿಂದ ಹಣ ಬಂದಿರಲಿಲ್ಲ. ಸ್ವಲ್ಪ ಹೊತ್ತು ಹಣಕ್ಕೆ ಕಾದ ಅವರು ವಾಪಾಸ್ ತೆರಳಿದ್ದರು. ಸ್ವಲ್ಪ ಸಮಯದ ಬಳಿಕ ಅದೇ ಎಟಿಎಂ ಕೇಂದ್ರಕ್ಕೆ ಬಂದ ಕಿರಣ್ ಅವರಿಗೆ ಮೆಷಿನ್ ಒಳಗೆ ಸಿಲುಕಿದ್ದ ಎರಡು ಸಾವಿರ ಹಣ ಸಿಕ್ಕಿತ್ತು. ಅಲ್ಲಿ ಯಾರು ಇಲ್ಲದಿದ್ದಾಗ ಹಣದ ವಿಚಾರದ ಕುರಿತು ಕುಂದಾಪುರ ಪಿಎಸ್ಐ ಹರೀಶ್ ಅವರ ಗಮನಕ್ಕೆ ತಂದಿದ್ದರು.

15 ನಿಮಿಷ ನಂತರ ಒಬ್ಬರು ಬಂದು ನನ್ನ ಖಾತೆಯಿಂದ 2ಸಾವಿರ ಡೆಬಿಟ್ ಆಗಿದೆ ಆದರೆ ನನಗೆ ಏಟಿಎಂ ನಲ್ಲಿ

ಹಣ ದೊರೆತ್ತಿಲ್ಲ ಎಂದು ಕಿರಣ್ ಪೂಜಾರಿಯವರ ಬಳಿ ಮಾಹಿತಿ ತಿಳಿಸಿದ್ದು ಅವರು ಹಣ ಖಾತೆದಾರರಾದ ಪ್ರವೀಣ್ ಅವರಿಗೆ ಹಿಂತಿರುಗಿಸಿದ್ದಾರೆ.

Comments are closed.