ಉಡುಪಿ: ಗಾಂಜಾ ಸೇವನೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣದಲ್ಲಿ ಉಡುಪಿ ಸೆನ್ ಹಾಗೂ ಪಡುಬಿದ್ರೆ ಪೊಲೀಸರ ಕಾರ್ಯಾಚರಣೆಯಲ್ಲಿ ಒಟ್ಟು ಎಂಟು ಮಂದಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಮಣಿಪಾಲ ಶಾಂಭವಿ ಹೆಬಿಟೆಟ್ ಬಳಿ ಹರಿಯಾಣ ರಾಜ್ಯದ ಸುಮಿತ್(21), ಮಣಿಪಾಲ ಶಾಂಭವಿ ರೆಸಿಡೆನ್ಸಿ ಬಳಿ ಬೆಳಗಾವಿಯ ಹೃಷಿಕೇಶ್ (23), ಮಣಿಪಾಲ ಎಚ್.ಪಿ. ಪೆಟ್ರೋಲ್ ಬಂಕ್ ಬಳಿ ಉದ್ಯಾವರ ಬೊಳ್ಜೆಯ ರಾಹುಲ್(22) ಮತ್ತು ಈಶ್ವರ ನಗರದ ಇಶಾನ್ ಶೆಟ್ಟಿ(21), ಮಣಿಪಾಲ ಶಾಂಭವಿ ಪ್ಯಾಲೆಸ್ ಬಳಿ ಉಡುಪಿ ನಿವಾಸಿ ಸಿದ್ದಾಂತ್ ಶೆಟ್ಟಿ(23), ಮಣಿಪಾಲ ಕೆಫೆ ಕಾಫಿ ಡೆ ಬಳಿ ಪೆರಂಪಳ್ಳಿಯ ಪೃಥ್ವಿಶ್ ಶೆಟ್ಟಿ(21) ಎಂಬವರನ್ನು ಸೆನ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಇನ್ನು ಪಡುಬಿದ್ರಿ ಪೇಟೆಯ ಪಡುಬಿದ್ರಿ -ಕಾರ್ಕಳ ಜಂಕ್ಷನ್ ಬಳಿ ಹೆಜಮಾಡಿಯ ಗಾಂಜಾ ಸೇವನೆ ಮಾಡಿದ್ದ ಕೀತ್ ಗ್ಯಾಬ್ರಿಯಲ್ ಪುಟಾರ್ಡೋ(25) ಹಾಗೂ ರಾಯನ್ ಬ್ಯಾಪ್ಟಿಸ್ಟ ಮೆಂಡೋನ್ಸಾ (25) ಎಂಬವರನ್ನು ಪಡುಬಿದ್ರಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
Comments are closed.