ಕರಾವಳಿ

ಕಾಮನ್ವೆಲ್ತ್ ಬೆಂಚ್ಪ್ರೆಸ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪ್ರದೀಪ್ ಕುಮಾರ್‌ಗೆ ಚಿನ್ನದ ಪದಕ: ಬಿಜೆಪಿ ಅಭಿನಂದನೆ

Pinterest LinkedIn Tumblr

ಮಂಗಳೂರು : ಇತ್ತೀಚೆಗೆ ಕೆನಡಾದ ಸೈಂಟ್ ಜೋನ್ಸ್ ನಲ್ಲಿ ಜರುಗಿದ ಕಾಮನ್ವೆಲ್ತ್ ಬೆಂಚ್ಪ್ರೆಸ್ ಪವರ್ ಲಿಫ್ಟಿಂಗ್ ಸ್ಪರ್ಧೆ ಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ 83ಕೆ.ಜಿ. ಸೀನಿಯರ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವ ಮಂಗಳೂರಿನ ಪ್ರದೀಪ್ ಕುಮಾರ್ ಆಚಾರ್ಯ ಅವರನ್ನು ಬಿ.ಜೆ.ಪಿ.ಜಿಲ್ಲಾ ಕಚರಿಯಲ್ಲಿ ಸನ್ಮಾನಿಸಲಾಯ್ತು.

ಈ ಸಂದಭ೯ ಶಾಸಕರುಗಳಾದ ವೇದವ್ಯಾಸ ಕಾಮತ್, ಸಂಜೀವ ಮಟಂದೂರು, ಕಾಪೊ೯ೕರೇಟರ್ ಆಗಿದ್ದ ಜಯಂತಿ ಆಚಾಯ೯ ಬೋಳೂರು, ದ.ಕ.ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷ ಕೆ.ಎಲ್. ಹರೀಶ್, ಸಂಘದ ಕಾಯ೯ದಶಿ೯ ಪ್ರಕಾಶ್ ಆಚಾರ್ಯ ಹಲೇಜಿ, ಉದಯೋನ್ಮುಖ ಸ್ಯಾಕ್ಸೋಫೋನ್ ಕಲಾವಿದ ಸತೀಶ್ ಆಚಾರ್ಯ ಸುರುಳಿ ಅಲ್ಲದೆ ಬಿ.ಜೆ.ಪಿ. ಪಕ್ಷದ ಅನೇಕ ಪದಾಧಿಕಾರಿಗಳು ಹಾಗೂ ಕಾಯ೯ಕತ೯ರು ಉಪಸ್ಥಿತರಿದ್ದರು.

Comments are closed.