ಉಡುಪಿ: ಉಡುಪಿ ಎಸ್ಪಿ ಕಚೇರಿಯಲ್ಲಿರುವ ವೈರ್ ಲೆಸ್ ವಿಭಾಗದ ಪೊಲೀಸ್ ಸಹಾಯಕ ಉಪನಿರೀಕ್ಷಕ ಕೆ.ಎಸ್.ಹರಿಶ್ಚಂದ್ರ ಎಂಬವರು ತನ್ನ ಪತ್ನಿಗೆ ಕ್ರಿಕೆಟ್ ಬ್ಯಾಟಿನಿಂದ ಹೊಡೆದು ಗಾಯಗೊಳಿಸಿರುವ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ ಅನಂತನಗರದಲ್ಲಿರುವ ಪೊಲೀಸ್ ವಸತಿಗೃಹದ ನಿವಾಸಿ ಎ.ಬಿ.ಸುಧಾ (40) ತನ್ನ ಪತಿಯಿಂದ ಹಲ್ಲೆಗೊಳಗಾಗಿದ್ದಾರೆ.
ಇವರು ಕೆ.ಎಸ್.ಹರಿಶ್ಚಂದ್ರರನ್ನು 2001ರಲ್ಲಿ ವಿವಾಹವಾಗಿದ್ದು, ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮದುವೆಯಾದ ದಿನದಿಂದ ಹರಿಶ್ಚಂದ್ರ ಸಣ್ಣಪುಟ್ಟ ವಿಚಾರಗಳಿಗೆ ಪತ್ನಿ ಜೊತೆ ಜಗಳ ಮಾಡಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸುಧಾ ಡಿ. 7ರಂದು ಬೆಳಗ್ಗೆ ಪತಿಯ ಮೊಬೈಲ್ ನೋಡಿ ನೀವು ಯಾಕೆ ಬೇರೆ ಹೆಂಗಸರೊಂದಿಗೆ ಚಾಟಿಂಗ್ ಮಾಡಿದ್ದು ಎಂದು ಕೇಳಿದ್ದು, ಇದರಿಂದ ಕೋಪಗೊಂಡು ಹರಿಶ್ಚಂದ್ರ ಅಲ್ಲೇ ಇದ್ದ ಕ್ರಿಕೆಟ್ ಬ್ಯಾಟನ್ನು ಹಿಡಿದು ಸುಧಾರ ತಲೆಗೆ ಹೊಡೆದು ಗಾಯಗೊಳಿಸಿ, ಕೈಗೆ ಕಾಲಿಗೆ ಬ್ಯಾಟಿನಿಂದ ಹೊಡೆದು ಅವಾಚ್ಯವಾಗಿ ನಿಂದಸಿರುವುದಾಗಿ ಆರೋಪಿಸಲಾಗಿದೆ.
Comments are closed.