ಕರಾವಳಿ

ಡಿ. 24 ರಂದು ಬಂಟ್ಸ್ ಮಜಿಬೈಲ್ ವತಿಯಿಂದ ಬಂಟರ ಸಮ್ಮೀಲನ

Pinterest LinkedIn Tumblr

ಮಂಜೇಶ್ವರ :ಬಂಟ್ಸ್ ಮಜಿಬೈಲ್ ವತಿಯಿಂದ”ಬಂಟರ ಸಮ್ಮೀಲನ2017″ ಡಿ. 24 ರಂದು ಮಜಿಬೈಲ್ ಬೂಡು ಶ್ರೀ ಮಹಾಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಹಾಕಿರುವ ಅರಿಯಡ್ಕ ದಿ! ಸರಳಾ ಜಿ. ರೈ ವೇದಿಕೆಯಲ್ಲಿ ಮದ್ಯಾಹ್ನ 2 ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಬಣೆಯಿಂದ ಜರಗಲಿದೆ.

ಮದ್ಯಾಹ್ನ 2 ಗಂಟೆಗೆ ಗ್ರಾಮದ ಹಿರಿಯ ಸದಸ್ಯರಿಂದ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉಧ್ಘಟನೆ ನಂತರ ಮನೋರಂಜನಾ ಆಟೋಟ ಸ್ಪರ್ದೆಗಳು ಜರಗಲಿದೆ. ಮನೋರಂಜನಾ ಸ್ಪರ್ದೆಯ ನಿರೂಪಕರಾಗಿ ಚಲನಚಿತ್ರ ನಟ ಸಾಹಿಲ್ ರೈ ಬಾಗವಹಿಸಲಿದ್ದರೆ. ಸಂಜೆ 6 ರಿಂದ ರಾಮ್ ಪ್ರಕಾಶ್ ಆಳ್ವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರಗಲಿದೆ. ಸಭಾ ಕಾರ್ಯಕ್ರಮಕ್ಕೆ ಗೌರವಾನ್ವಿತ ಅತಿಥಿಗಳಾಗಿ ಶ್ರೀ ಕೆ.ಅಜಿತ್ ಕುಮಾರ್ ರೈ ಮಾಲಾಡಿ (ಅಧ್ಯಕ್ಷರು ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು), ಡಾ. ಎಂ. ಮೋಹನ್ ಆಳ್ವ (ಅಧ್ಯಕ್ಷರು ಅಳ್ವಾಸ್ ಸಮೂಹ ಸಂಸ್ಥೆ ಮೂಡಬಿದಿರೆ), ಶ್ರೀಮತಿ ಕಾಂತಿ ಶೆಟ್ಟಿ (ಜೊತೆ ಕಾರ್ಯದರ್ಶಿ ಬಂಟರ ಸಂಘ ಬೆಂಗಳೂರು) ,ಕಾವು ಹೇಮನಾಥ ಶೆಟ್ಟಿ (ಜೊತೆ ಕಾರ್ಯದರ್ಶಿ ಮಾತೃ ಸಂಘ ಮಂಗಳೂರು), ಸಂದೀಪ್ ಶೆಟ್ಟಿ ಮರವೂರು (ಉದ್ಯಮಿ ಮಂಗಳೂರು) ,ನ್ಯಾಯವಾದಿ ದಾಮೋದರ ಶೆಟ್ಟಿ ಮಜಿಬೈಲ್ (ಪ್ರದಾನ ಕಾರ್ಯದರ್ಶಿ ಜಿಲ್ಲಾ ಬಂಟರ ಸಂಘ ಕಾಸರಗೋಡು), ಜಗದೀಶ್ ಶೆಟ್ಟಿ ಎಲಿಯಾನ(ಅಧ್ಯಕ್ಷರು ಬಂಟರ ಸಂಘ ಮೀಂಜ), ಶ್ರೀದರ ಶೆಟ್ಟಿ ಮುಟ್ಟ(ಅಧ್ಯಕ್ಷರು ಬಂಟರ ಸಂಘ ಮಂಗಲ್ಪಾಡಿ), ದೇವಪ್ಪ ಶೆಟ್ಟಿ ಚಾವಡಿಬೈಲ್ ಗುತ್ತು(ಅಧ್ಯಕ್ಷರು ವರ್ಕಾಡಿ ಬಂಟರ ಸಂಘ), ದಾಮೋದರ ಶೆಟ್ಟಿ ಕುಂಜತ್ತೂರು(ಅಧ್ಯಕ್ಷರು ಬಂಟರ ಸಂಘ ಮಂಜೇಶ್ವರ) ಇವರು ಪಾಲ್ಘೋಲ್ಲಲಿರುವರು.

ಮುಂಬಯಿ ಉದ್ಯಮಿಗಳಾದ ಗಣೇಶ್ ರೈ ಕೊರಿಕ್ಕಾರ್, ಸೀತಾರಾಮ ಶೆಟ್ಟಿ ಬಂಟುಹಿತ್ಲು, ಮೋಹನ್ ಹೆಗ್ಡೆ ಬೆಜ್ಜ,ಮೋಹನ್ ಶೆಟ್ಟಿ ಮಜ್ಜಾರು, ಹರೀಶ್ ಭಂಡಾರಿ ಕೌಡೂರು ಬೀಡು, ಪ್ರೇಮ್ ಜೀತ್ ಸುಲಾಯ ಹೊಸಮನೆ ಪಟ್ಟತ್ತಮೊಗರು(ದುಬೈ),ಶಿವರಾಮ ಪಕಳ ಉಪ್ಪಳ(ಉದ್ಯಮಿ),ಪ್ರಗತಿಪರ ಗ್ರಾಮದ ಹಿರಿಯ ಕೃಷಿಕರಾದ ಬಾಬು ಶೆಟ್ಟಿ ಕಂಗುಮೆ, ಅನಂದ ಶೆಟ್ಟಿ ಮಾಟೆ ಇವರನ್ನು ಗೌರವನ್ವಿತ ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಗುವುದು.

ವಿಶೇಷ ಆಕರ್ಷಿತರಾಗಿ ಕನ್ನಡ ಚಿತ್ರನಟರಾದ ಶೈನ್ ಶೆಟ್ಟಿ, ರೂಪೇಶ್ ಶೆಟ್ಟಿ, ಸಾಹಿಲ್ ರೈ, ತುಳು ಚಿತ್ರ ನಿರ್ದೆಶಕ ಕೆ. ಸೂರಜ್ ಶೆಟ್ಟಿ ಕಾರ್ಯಕ್ರಮಕ್ಕೆ ಆಗಮಿಸಿ ಮನೋರಂಜನಾ ನಿಡಲಿದ್ದಾರೆ.

ರಾತ್ರಿ 8 ರಿಂದ ಸಿಜ್ಲಿಂಗ್ ಗೈಸ್ ಮಂಗಳೂರು ತಂಡದವರಿಂದ ನೃತ್ಯ ಕಾರ್ಯಕ್ರಮ ಹಾಗು ರಾತ್ರಿ 9 ರಿಂದ ಚಿತ್ರನಟ ವಿಸ್ಮಯ್ ವಿನಾಯಕ್ ಬಳಗದವರಿಂದ ಕಡೆ ಕೊಡಿ ಹಾಸ್ಯ ಕಾರ್ಯಕ್ರಮ ಜರಗಲಿದೆ.
ಹೆಚ್ಚಿನ ವಿವರಕ್ಕಾಗಿ ಸಂಪರ್ಕಿಸಿ 9496560293,9061188648,9061152107,9633527196.
ವರದಿ :ವಿಜಯ ಕೂಮರ್ ಶೆಟ್ಟಿ ಗಾಣದಮುಲೆ

Comments are closed.