ಕರಾವಳಿ

ಟಿಪ್ಪುವಿನಿಂದ ಸಾಕಷ್ಟು ದೇವಸ್ಥಾನಗಳ ರಕ್ಷಣೆಯಾಗಿದೆ : ಟಿಪ್ಪು ಜಯಂತಿ ಉದ್ಘಾಟಿಸಿ ಸಚಿವ ರೈ

Pinterest LinkedIn Tumblr

ಮಂಗಳೂರು, ನವೆಂಬರ್. 10: ಟಿಪ್ಪು ಸುಲ್ತಾನ್ ಸಾಮಾಜಿಕ ಸಾಮರಸ್ಯದಲ್ಲಿ ಗುರುತರವಾದ ಕೆಲಸ ಮಾಡಿದ್ದಾನೆ.ಸಾಕಷ್ಟು ದೇವಸ್ಥಾನಗಳ ರಕ್ಷಣೆ ಹಾಗೂ ಸಹಾಯವನ್ನೂ ಮಾಡಿದ್ದಾನೆ.ಹಿಂದಿನ ಇತಿಹಾಸಕಾರರು ಸತ್ಯವನ್ನೇ ಬರೆದಿದ್ದಾರೆ. ಈಗಿನ ಇತಿಹಾಸಕಾರರು ಮೂಗಿನ ನೇರಕ್ಕೆ ಬರೆಯುತ್ತಿದ್ದಾರೆ. ಇತಿಹಾಸ ಸೃಷ್ಟಿಸಿದ ಟಿಪ್ಪುವಿನ ಹೆಸರು ಕೆಡಿಸುವಂತಹ ಕೆಲಸ ನೋವು ತಂದಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

ದ.ಕ. ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಇವುಗಳ ಆಶ್ರಯದಲ್ಲಿ ಶುಕ್ರವಾರ ಮಂಗಳೂರಿನ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಹಝ್ರತ್ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಆಹಾರ ಸಚಿವ ಯು.ಟಿ.ಖಾದರ್, ಶಾಸಕರಾದ ಜೆ.ಆರ್.ಲೋಬೊ, ಶಕುಂತಳಾ ಶೆಟ್ಟಿ, ಮೇಯರ್ ಕವಿತಾ ಸನಿಲ್, ಗೇರು ಅಭಿವೃದ್ಧಿ ನಿಗಮದ ಅದ್ಯಕ್ಷ ಬಿ.ಎಚ್.ಖಾದರ್, ಜಿಲ್ಲಾಧಿಕಾರಿ ಸಸಿಕಾಂತ್ ಸೆಂದಿಲ್, ಅಪರ ಜಿಲ್ಲಾಧಿಕಾರಿ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Comments are closed.