ಕರಾವಳಿ

50ನೇಯ ಪ್ರತಿಷ್ಠಾ ಸುವರ್ಣ ಮಹೋತ್ಸವ :ಕೊಂಚಾಡಿ ಶ್ರೀ ವೆಂಕಟರಮಣನಿಗೆ ಸಹಸ್ರ ಕುಂಭಾಭಿಷೇಕ

Pinterest LinkedIn Tumblr

ಮಂಗಳೂರು : ಕೊಂಚಾಡಿಯ ಶ್ರೀ ವೆಂಕಟರಮಣನಿಗೆ 50ನೇಯ ಪ್ರತಿಷ್ಠಾ ಸುವರ್ಣ ಮಹೋತ್ಸವದ ಶುಭ ಸಂದರ್ಭದ ಸಲುವಾಗಿ ಪರಮಗುರುಗಳಾದ ಶ್ರೀಮತ್ ಸುಧೀಂಧ್ರತೀರ್ಥ ಸ್ವಾಮೀಜಿಯವರ ಆಶೀರ್ವಾದ​ದೊಂದಿಗೆ ಕಾಶೀಮಠಾಧೀಶರಾದ ಶ್ರೀಮತ್ ಸಂಯಮೀಂದ್ರತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ​ಗುರುವಾರ​ ಶ್ರೀ ವೆಂಕಟರಮಣನಿಗೆ ಸಹಸ್ರ ಕುಂಭಾಭಿಷೇಕ ವಿಜ್ರಭಣೆಯಿಂದ ನೆರವೇರಿತು.

ಪದ್ಮಸಂಹಿತಾ ಪ್ರಕಾರ ಏಕೋತ್ತರ ಸಹಸ್ರ ದ್ರವ್ಯ ಕಲಶಾಭಿಷೇಕ​ವು ಪ್ರಾತ: ಕಾಲ ವಿಶೇಷ ಕುಂಭಾಭಿಷೇಕದ ಮಹಾ ಪ್ರಾರ್ಥನೆ , ​ಯಮುನಾ ಪೂಜೆ, ಕಲಶ ಪೂರಣ, ಗಣಪತಿ ಪೂಜನ ಪೂರ್ವಕ ಧಾರ್ಮಿಕ ವಿಧಿಗಳ ಆರಂಭಗೊಂಡು ​ಎಕೋತ್ತರ ಸಹಸ್ರ ಕಲಶ ಸ್ನಪನ​ ​ ಕಲಶಾಭಿ ಮಂತ್ರಣ, ಪಂಚಾಮೃತ ಕಲಶಾಭಿಷೇಕ,​ ​ಯಜ್ಞದಲ್ಲಿ ಆವಾಹಿತ ದೇವತಾ ಪೂಜನ ಪೂರ್ವಕ ಯಜ್ಞಾರಂಭ ನಿತ್ಯಹವನ, ಸಾನಿಧ್ಯ ಹವನ,​ ​ಸಹಸ್ರಕುಂಭಾಭಿಷೇಕ, ಬ್ರಹ್ಮಕಲಶಾಭಿಷೇಕ, ವರ್ಧಿನೀಕಲಶಾಭಿಷೇಕ, ಗಂಗಾಜಲಾಭಿಷೇಕ, ಪ್ರಸನ್ನ ಪೂಜೆ, ಅಷ್ಠಮಂಗಲದರ್ಶನ, ಪಟ್ಟಕಾಣಿಕೆ, ಮಹಾ ಪ್ರಸಾದ, ಯಜ್ಞದಲ್ಲಿ ದೇವರ ​ದಿವ್ಯ ಉಪಸ್ಥಿತಿಯಲ್ಲಿ ಪೂರ್ಣಾಹುತಿ, ಮಹಾ ಪೂಜೆ, ಗೋಪೂಜೆ, ಗುರುಭಿಕ್ಷೆ, ಬ್ರಾಹ್ಮಣ​ ​ಸಂತರ್ಪಣೆ, ಭೂರಿ ಸಮಾರಾಧನೆ ​ಬಳಿಕ ​ಸಾಯಂ ಸಭಾಕಾರ್ಯಕ್ರಮ ಶ್ರೀ​ ​ಗುರುಗಳಿಗೆ ಪಾದಪೂಜೆ, ಶ್ರೀಗುರುಗಳ ಅಮೃತ ಹಸ್ತಗಳಿಂದ ಸೇವಾದಾರರಿಗೆ ಸನ್ಮಾನ, ಆಶೀರ್ವಚನ ಮಂತ್ರಾಕ್ಷತೆ ,ರಾತ್ರಿ ಪೂಜೆ, ಉತ್ಸವ, ವಸಂತ ಪೂಜೆ ​ಸಹಸ್ರಾರು ಭಜಕರ ಸಮ್ಮುಖದಲ್ಲಿ ನಡೆಯಿತು .

ದಶಾವತಾರ ಸ್ವರ್ಣ ಮಾಲೆ ಸಮರ್ಪಣೆ:

ಕೊಂಚಾಡಿ ಶ್ರೀ ವೆಂಕಟರಮಣ ದೇವರ ಸಹಸ್ರ ಕುಂಭಾಭಿಷೇಕ ಪ್ರಯುಕ್ತ ಬುಧವಾರ ಶ್ರೀ ಮಹಾಲಸಾ ನಾರಾಯಣಿ ದೇವಿಗೆ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ಶತಕಲಶಾಭಿಷೇಕ , ಗಂಗಾಭಿಷೇಕ , ಕನಕಾಭಿಷೇಕ ನೆರವೇರಿತು .

ಕುಂಭಾಭಿಷೇಕದ ಸವಿ ನೆನಪಿಗಾಗಿ ಶ್ರೀ ದೇವರಿಗೆ ನೂತನವಾಗಿ ನಿರ್ಮಿಸಲಾದ ದಶಾವತಾರ ಸ್ವರ್ಣ ಮಾಲೆ ಸಮರ್ಪಿಸಲಾಯಿತು .

ಕುಂಭಾಭಿಷೇಕ ಪೂರ್ವಭಾವಿಯಾಗಿ ಶ್ರೀ ದೇವಳದಲ್ಲಿ ಶತಕಲಶಾಭಿಷೇಕ ಸ್ನಪನ. ಶ್ರೀ ಗಣಪತಿ ಪೂಜನ, ಸ್ವಸ್ತಿವಾಚನ ಆವಾಹಿತ ದೇವತಾ ಪೂಜನ ಯಜ್ಞಾರಂಭ ಶತಕಲಶಾಭಿಷೇಕ ಸ್ನಪನ, ಶ್ರೀಮಹಾಲಸಾ ನಾರಾಯಣೀ ದೇವಿಗೆ ಶತಕಲಶಾಭಿಷೇಕ ದೇವರು ಯಜ್ಞ ಮಂಟಪಕ್ಕೆ ಚಿತ್ತೈಸಿ ಲಘುಪೂರ್ಣಾಹುತಿ ಮಹಾಮಂಗಳಾರತಿ, ಗೋಪೂಜೆ, ಮಧ್ವಗುರುಪೂಜೆ, ಗುರುಬಿಕ್ಷೆ ಸುವಾಸಿನ ಬ್ರಾಹ್ಮಣ ಆರಾಧನೆ ಸಮಾರಾಧನೆ ನಡೆಯಿತು .

ಚಿತ್ರ : ಮಂಜು ನೀರೇಶ್ವಾಲ್ಯ

Comments are closed.