ಉಡುಪಿ: ಹಠಾತ್ತಾಗಿ ಎದುರಿಗೆ ಬಂದ ಬೈಕನ್ನು ಅಪಘಾತವಾಗುವುದನ್ನು ತಪ್ಪಿಸಲು ಬಲವಾಗಿ ಬ್ರೇಕ್ ಹಾಕಿದ ಪರಿಣಾಮ ಪಾರ್ಕ್ ಮಾಡಿದ್ದ ಕಾರಿನ ಮೆಲೆ ಬಸ್ ಬಿದ್ದ ಘಟನೆ ಉಡುಪಿಯ ಎಂಜಿಎಂ ಕಾಲೇಜು ಎದುರು ಶನಿವಾರ ನಡೆದಿದೆ.
ಶಿವಮೊಗ್ಗದಿಂದ ಬರುತ್ತಿದ್ದ ಹನುಮಾನ್ ಖಾಸಗೀ ಸಂಸ್ಥೆಗೆ ಸೇರಿದ ಬಸ್ಸು ಎಂಜಿಎಂ ಕಡೆಗೆ ಬರುತ್ತಿದ್ದಾಗ ಹಠಾತ್ತಾಗೆ ಎದುರಿಗೆ ಬಂದ ಬೈಕನ್ನು ತಪ್ಪಿಸಲು ಹೋಗಿ ಬ್ರೇಕ್ ಹಾಕಿದ್ದು ಇದರ ಪರಿಣಾಮ ಬಸ್ಸು ಕಾರಿನ ಮೇಲೆ ಬಿದ್ದಿದ್ದೆ ಬಸ್ಸಿನಲ್ಲಿದ್ದ 5 ಮಂದಿಗೆ ಸಣ್ಣಪುಟ್ಟಗಾಯಗಳಾಗಿದ್ದು ಅವರನ್ನು ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರು ಚಾಲಕಿ ಕೊಡವೂರಿನ ಅನಿತಾ ಸುವರ್ಣ ಕಾರು ಪಾರ್ಕ್ ಮಾಡಿ ಹೋಗಿದ್ದು ವಾಪಾಸ್ ಬರುವಷ್ಟರಲ್ಲಿ ಕಾರು ನಜ್ಜುಗುಜ್ಜಾಗಿತ್ತು. ಈ ದೃಶ್ಯವನ್ನು ಕಂಡ ಕಾರು ಚಾಲಕಿ ತಲೆ ತಿರುಗಿ ಬಿದ್ದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Comments are closed.