ಉಡುಪಿ: ಉಡುಪಿ ನಗರಸಭೆಗೆ ಸೇರಿದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಬ್ಯಾಂಕ್ ಉದ್ಯೋಗಿ ಮೃತಪಟ್ಟ ಘಟನೆ ಉಡುಪಿಯ ಡಯನಾ ಸರ್ಕಲ್ ಬಳಿ ನಡೆದಿದೆ.
ಕಟಪಾಡಿಯ ಚರ್ಚ್ ನಿವಾಸಿ ಮಂಗಳಾ ರಾವ್ (26) ಮೃತಪಟ್ಟ ಯುವತಿಯಾಗಿದ್ದು ಇಂದು ಬ್ಯಾಂಕ್ ಗೆ ಬರುತ್ತಿದ್ದ ಸಂದರ್ಬ ಡಯನಾ ಸರ್ಕಲ್ ತಿರುವಿನಲ್ಲಿ ಟ್ಯಾಕ್ಟರ್ ಡಿಕ್ಕಿ ಹೊಡೆದಿದೆ. ಈ ಸಂದರ್ಬ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಗಲೇ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಉಡುಪಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.