ಕುಂದಾಪುರ: ವಿಪರೀತ ಕುಡಿತದ ಚಟ ಹೊಂದಿದ್ದು, ಸೋ ಕಾಲ್ಡ್ ಮಾನಸಿಕ ಅಸ್ವಸ್ಥನಾಗಿದ್ದ ಮಗನೋರ್ವ ತಾಯಿಯನ್ನೇ ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ಕುಂದಾಪುರ ತಾಲೂಕಿನ ಬಳ್ಕೂರಿನಲ್ಲಿ ಶುಕ್ರವಾರ ತಡರಾತ್ರಿ ನಡೆದಿದ್ದು, ಶನಿವಾರ ಮಧ್ಯಾಹ್ನದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.
ಬಳ್ಕೂರಿನ ನಿವಾಸಿ ಸಾಧು ಪೂಜಾರಿ(66) ಎನ್ನುವಾಕೆಯೇ ಸ್ವಂತ ಮಗನಿಂದ ಕೊಲೆಯಾದ ದುರ್ದೈವಿ. ಆಕೆಯ ಪುತ್ರಮಹಾಶಯ ರಾಮ ಪೂಜಾರಿಯೇ ತನ್ನ ತಾಯಿಯನ್ನು ಕೊಲೆ ಮಾಡಿದ ಕಿರಾತಕ.
ಈ ಭಾಗದಲ್ಲಿ ತಾನೊಬ್ಬ ಮಾನಸಿಕ ಅಸ್ವಸ್ಥ ಎಂದು ತೋರಡಿಸಿಕೊಂಡಿದ್ದ ರಾಮ ಪೂಜಾರಿ ವಿಪರೀತ ಕುಡಿತದ ಚಟ ಹೊಂದಿದ್ದನೆನ್ನಲಾಗಿದೆ. ವಿವಾಹಿತನಾಗಿದ್ದ ಈತ ಮಡದಿ ಹಾಗೂ ಮಕ್ಕಳನ್ನು ತೊರೆದು ತನ್ನ ತಾಯಿಯೊಂದಿಗೆ ವಾಸವಿದ್ದ,ಅಲ್ಲಿಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ರಾಮ ನಿತ್ಯ ರಾತ್ರಿ ಕುಡಿದು ಬಂದು ತಾಯಿಯೊಂದಿಗೆ ತಗಾದೆ ತೆಗೆಯುತ್ತಿದ್ದ ಇರ್ವರು ಕೆಲ ಕಾಲ ಜಗಳವಾಡಿ ಬಳಿಕ ಸುಮ್ಮನಾಗಿ ಅವರ ಪಾಡಿಗೆ ಅವರು ಮಲಗುತ್ತಿದ್ದರು. ಆದದೇ ಶುಕ್ರವಾರ ರಾತ್ರಿ ಕುಡಿದು ಬಂದ ರಾಮ ತಾಯಿ ಜೊತೆ ಜಗಳಕ್ಕಿಳಿದು ಕೂಗಾಡಿದ್ದಾನೆ. ಆ ಜಗಳ ಕೊನೆಯಲ್ಲಿ ಕೊಲೆಯಾಗಿ ಮುಗಿದಿದೆ.
ಶನಿವಾರ ಮಧ್ಯಾಹ್ನದ ಬಳಿಕ ಈ ಘಟನೆ ಬೆಳಕಿಗೆ ಬಂದಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಮಾಡಿದ ರಾಮ ಬೆಳಗ್ಗೆ ಅಲ್ಲಿಲಿ ತಾನು ತಾಯಿಯನ್ನು ಕೊಂದಿದ್ದ ಬಗ್ಗೆ ಹೇಳಿಕೊಂಡಿದ್ದನಾದರೂ ಕೂಡ ಆತನ ಮಾತಿನ ಬಗ್ಗೆ ಅಷ್ಟ್ಯಾರು ತಲೆಕೆಡಿಸಿಕೊಂಡಿಲ್ಲ. ಆದ್ರ್ಎ ಮಧ್ಯಾಹ್ನದ ಬಳಿಕ ತಯಿ ಮನೆ ಸಮೀಪದಲ್ಲಿಯೇ ವಾಸ್ತ್ಯವ್ಯವಿದ್ದ ಮಗಳು ಹಾಗೂ ಅಳಿಯ ಆಕೆ ಮನೆಗೆ ತೆರಳಿ ನೋಡುವಾಗ ಈ ಘಟನೆ ಬೆಳಕಿಗೆ ಬಂದಿದೆ.
ಘಟನಾ ಸ್ಥಲಕ್ಕೆ ಕುಂದಾಪುರ ಎಸ್.ಐ. ನಾಸೀರ್ ಹುಸೇನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಕುಂದಾಪುರ ಸರ್ಕಾರೀ ಆಸ್ಪತ್ರೆಗೆ ರವಾನಿಸಲಾಗಿದೆ.
Comments are closed.