ಕರಾವಳಿ

ಗಂಗೊಳ್ಳಿ 24×7 ಹೆಲ್ಫ್‌ಲೈನ್‌ನ ಸಕ್ರೀಯ ಕಾರ್ಯಕರ್ತ ಸುಹೈಲ್ ಸಾವು

Pinterest LinkedIn Tumblr

ಕುಂದಾಪುರ: ಕಳೆದ ಸುಮಾರು ಒಂದು ತಿಂಗಳ ಹಿಂದೆ ಹೊನ್ನಾವರದ ರಾ.ಹೆದ್ದಾರಿಯಲ್ಲಿ ನಡೆದ ಲಾರಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಗೊಳ್ಳಿಯ ಜಾಮೀಯಾ ಮೊಹಲ್ಲಾ ನಿವಾಸಿ ಮಹಮ್ಮದ್ ಸುಹೈಲ್ (21) ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ಮೃತಪಟ್ಟಿದ್ದಾರೆ.

Gangolli suhail Death

ಗಂಗೊಳ್ಳಿಯ 24×7 ಹೆಲ್ಫ್‌ಲೈನ್‌ನ ಸಕ್ರೀಯ ಕಾರ್ಯಕರ್ತರಾಗಿದ್ದ ಇವರು ಹಲವು ಶವಗಳ ವಿಲೇವಾರಿ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಶ್ರಮಿಸಿದ್ದರು. ಮೃತನು ತಾಯಿ, ಮೂವರು ಸಹೋದರರು ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.

ಸಂತಾಪ : ಸಕ್ರೀಯ ಕಾರ್ಯಕರ್ತ ಮಹಮ್ಮದ್ ಸುಹೈಲ್ ನಿಧನಕ್ಕೆ ಸಂತಾಪ ಸೂಚಿಸಿರುವ 24×7 ಹೆಲ್ಫ್‌ಲೈನ್ ಸಂಸ್ಥೆ, ಇದೊಂದು ತುಂಬಲಾರದ ನಷ್ಟ ಎಂದು ಸಂತಾಪ ಸೂಚಿಸಿದೆ.

Write A Comment