ಕರಾವಳಿ

ನ. 23ರಂದು ಶ್ರೀಕೃಷ್ಣನಿಗೆ ಕೋಟಿ ತುಳಸಿ ಅರ್ಚನೆ

Pinterest LinkedIn Tumblr

uDupi shri Krishna

ಉಡುಪಿ: ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ವಿಂಶತಿ ಸಂಭ್ರಮಾಚರಣೆಯ ಅಂಗವಾಗಿ ನಿಸರ್ಗ ಆಯುರ್ವೇದ ಸಂಸ್ಥೆಯ ಡಾ.ವಿ.ಅಶೋಕ್ ಕುಮಾರ್ ಅವರ ಸಹಯೋಗದೊಂದಿಗೆ ಶ್ರೀಕೃಷ್ಣನಿಗೆ ಕೋಟಿ ತುಳಸಿ ಅರ್ಚನೆ ಕಾರ್ಯಕ್ರಮ ನ.23 ರಂದು ನಡೆಯಲಿದೆ.

ಶ್ರೀಕೃಷ್ಣಮಠದಲ್ಲಿ ಸುದ್ದಿಗೋಷ್ಠಿ ನಡೆಸಿದ ಪರ್ಯಾಯ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹಾಗೂ ನಿಸರ್ಗ ಆಯುರ್ವೇದ ಸಂಸ್ಥೆಯ ಡಾ.ವಿ.ಅಶೋಕ್ ಕುಮಾರ್ ಮಾಹಿತಿ ನೀಡಿದರು.

Tulasi-1

ತಾಲೂಕು ಬ್ರಾಹ್ಮಣ ಮಹಾಸಭಾದ ಸುಮಾರು 30ವಲಯಗಳಿಂದ ಹಾಗೂ ಸಾರ್ವಜನಿಕರಿಂದ ತುಳಸಿಯನ್ನು ಪಡೆದು ಶ್ರೀಕೃಷ್ಣನಿಗೆ ಅರ್ಪಿಸಲಾಗುವುದು. ನ.22ರಂದು ಸಂಜೆ ರಥಬೀದಿಯಲ್ಲಿ ತುಳಸಿ ಮೆರವಣಿಗೆ ನಡೆಯಲಿದೆ. ನ.23ರಂದು ಮುಂಜಾವದಿಂದಲೇ ವಿಷ್ಣು ಸಹಸ್ರನಾಮ ಪಾರಾಯಣದೊಂದಿಗೆ ಕೋಟಿ ತುಳಸಿ ಅರ್ಚನೆ ನಡೆಯಲಿದೆ ಎಂದು ಅವರು ತಿಳಿಸಿದರು.

ಲೋಕ ಕಲ್ಯಾಣಾರ್ಥವಾಗಿ ನಡೆಯುವ ಈ ಮಹಾತ್ಕಾರ್ಯದಲ್ಲಿ ಭಗವದ್ಭಕ್ತರು ತುಳಸಿ, ತನು, ಮನಗಳ ಸಹಕಾರ ನೀಡಬಹುದಾಗಿದೆ. ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಗೌರವಾಧ್ಯಕ್ಷ ಕೆ.ಕೃಷ್ಣರಾಜ ಸರಳಾಯ, ಅಧ್ಯಕ್ಷ ನರಸಿಂಹ ಉಪಾಧ್ಯ, ಕಾರ್ಯದರ್ಶಿ ವೆಂಕಟರಾಜ ಭಟ್, ನಾಗರಾಜ ಉಪಾಧ್ಯ, ಶ್ರೀಕಾಂತ ಉಪಾಧ್ಯ ಉಪಸ್ಥಿತರಿದ್ದರು.

Write A Comment