ಔರಂಗಾಬಾದ್: ತಾನು ದುಡಿದು ತಂದ ಸಂಬಳವನ್ನೆಲ್ಲ ಪತ್ನಿ ದೋಚಿಕೊಳ್ಳುತ್ತಾಳೆಂದು ಮನನೊಂದ ಪತಿ ಆತ್ಮಹತ್ಯೆಗೆ ಶರಣಾದ ಹೇಯ ಘಟನೆ ಔರಂಗಾಬಾದ್ನಲ್ಲಿ ನಡೆದಿದೆ.
ಮೃತನನ್ನು ಬಾಬಾ ಸಾಹೇಬ್ ಶಿಂಧೆ ಎಂದು ಗುರುತಿಸಲಾಗಿದ್ದು, ಆತನ ಪತ್ನಿ ಮತ್ತು ಆಕೆಯ ಪರಿವಾರದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗಂಗಾಪುರ ತಾಲೂಕಿನ ಶಿವ್ರೈ ನಿವಾಸಿಯಾಗಿದ್ದ ಶಿಂಧೆ ಪತ್ನಿ ಜತೆ ಜಗಳವಾಡಿ ಆಗಸ್ಟ್ 9 ರಂದು ಮನೆ ಬಿಟ್ಟಿದ್ದ. ಕೆಲ ದಿನಗಳ ಬಳಿಕ ಆತನ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಯ್ತು.
ಮೃತನ ಕುಟುಂಬವನ್ನು ವಿಚಾರಿಸಿದಾಗ ಪತ್ನಿ ಮತ್ತು ಆಕೆಯ ಮನೆಯವರ ಮೇಲೆ ದೌರ್ಜನ್ಯದ ಆರೋಪ ಕೇಳಿಬಂತು.
ತನ್ನ ಮಗ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಆತನ ಪ್ರತಿ ತಿಂಗಳ ಸಂಬಳವನ್ನು ಕಿತ್ತುಕೊಳ್ಳುತ್ತಿದ್ದ ಪತ್ನಿ ಪೋಲು ಮಾಡುತ್ತಿದ್ದಳು. ಇದರಿಂದ ನೊಂದಿದ್ದ ಮಗ ಆಕೆಯನ್ನು ತ್ಯಜಿಸಿ ನಮ್ಮ ಬಳಿ ಬಂದಿರಲು ನಿರ್ಧರಿಸಿದ್ದ. ಆದರದಕ್ಕೆ ವಿರೋಧ ವ್ಯಕ್ತ ಪಡಿಸಿದ್ದ ಪತ್ನಿ , ಆಕೆಯ ಸಹೋದರರು ಮತ್ತು ಪೋಷಕರು ಒತ್ತಡ ಹೇರಿ ಬೆದರಿಕೆ ಹಾಕುತ್ತಿದ್ದರು. ಇದರಿಂದ ಮನನೊಂದ ಮಗ ಸಾವಿಗೆ ಶರಣಾಗಿದ್ದಾನೆ ಎಂದು ಮೃತರ ತಂದೆ ದೂರಿದ್ದಾರೆ.
Comments are closed.