ಠಾಣೆ: ರೋಗ ಪೀಡಿತ ಮಗನ ನಿರಂತರ ಅಳುವಿನಿಂದ ಬೇಸತ್ತ ತಾಯಿಯೊಬ್ಬರು, ಆರು ತಿಂಗಳ ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಂದು ಹಾಕಿದ ಬೀಭತ್ಸ ಘಟನೆ ವರದಿಯಾಗಿದೆ.
ಈ ಸಂಬಂಧ ಭೀವಂಡಿಯ ಧಪ್ಸಿಪಾಡ ಗ್ರಾಮದ ಕಲ್ಪನಾ ಗಾಯಕ್ವಾಡ್ ಎಂಬುವವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಪದೇಪದೆ ಕಾಯಿಲೆ ಬೀಳುತ್ತಿದ್ದ ಮಗ ರಿಶಬ್ ಸದಾ ಅಳುತ್ತಿದ್ದ. ಆತನ ರಚ್ಚೆಯಿಂದ ರೋಸಿ ಹೋಗಿದ್ದ ತಾಯಿ ಕಲ್ಪನಾ, ಆತನನ್ನು ನೀರಿನಲ್ಲಿ ಮುಳುಗಿಸಿ ಕೊಂದು ಹಾಕಿದಳು. ನಂತರ ಅದು ಆಕಸ್ಮಿಕ ಸಾವು ಎಂದು ನಂಬಿಸಲು ಯತ್ನಿಸಿದಳು. ಆದರೆ ತನಿಖೆ ವೇಳೆ ಕೊಲೆ ಎನ್ನುವುದು ಖಾತ್ರಿಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.