ರಾಷ್ಟ್ರೀಯ

ಮತ್ತೆ ಎಟಿಎಂಗೆ ಬಂದ ರಾಹುಲ್ ಗಾಂಧಿ!

Pinterest LinkedIn Tumblr

rahulಮುಂಬೈ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ನೋಟ್ ಬ್ಯಾನ್ ಮಾಡಿದ ಬೆನ್ನಲ್ಲೇ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂದಿ 4000ರೂ. ಹಣಕ್ಕಾಗಿ ಕ್ಯೂನಲ್ಲಿ ನಿಂತು ಸುದ್ದಿಯಾದ ಬಳಿಕ ಇದೀಗ ಮತ್ತೆ ಎಟಿಎಂ ಹತ್ರ ಬಂದಿದ್ದಾರೆ.

ಆದರೆ ಈ ಬಾರಿ ಬಂದಿರೋದು ಹಣ ಡ್ರಾ ಮಾಡೋಕ್ಕೆ ಅಲ್ಲ. ಬದಲಾಗಿ, ಕ್ಯೂನಲ್ಲಿ ನಿಂತ ಜನರನ್ನು ಮಾತಾಡಿಸೋಕೆ. ಹೌದು. ಆರ್‍ಎಸ್‍ಎಸ್ ನಾಯಕರು ಹೂಡಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಭಿವಂಡಿ ಕೋರ್ಟ್ ಇಂದು ರಾಹುಲ್‍ಗೆ ಜಾಮೀನು ಮಂಜೂರು ಮಾಡಿದೆ. ಈ ಹಿನ್ನಲೆಯಲ್ಲಿ ಕೋರ್ಟ್‍ನಿಂದ ಹಿಂತಿರುಗುತ್ತಿದ್ದ ವೇಳೆ ಉಪನಗರ ವಕೋಲಾದಲ್ಲಿರುವ ಎಟಿಎಂ ಮುಂದೆ ಕ್ಯೂ ನಿಂತಿದ್ದ ಜನರೊಂದಿಗೆ ರಾಹುಲ್ ಸಂಭಾಷಣೆ ನಡೆಸಿದ್ದಾರೆ.

ಈ ಸಂಭಾಷಣೆಯ ಫೋಟೋಗಳು ಕೂಡಲೇ ಸಾಮಾಜಿಕ ಜಲತಾಣದಲ್ಲಿ ವೈರಲ್ ಆಗಿದ್ದು, ರಾಹುಲ್ ವಿರುದ್ಧ ಟೀಕೆಗಳ ಸುರಿಮಳೆಗಳೇ ಹರಿದುಬರುತ್ತಿದೆ. ಮೋದಿ ಮಾಡಿರುವ ಒಳ್ಳೆ ಕೆಲಸದಲ್ಲಿ ರಾಹುಲ್ ನಾಟಕವಾಡುತ್ತಿದ್ದಾರೆ ಎಂದೆಲ್ಲಾ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಸಾಕಷ್ಟು ಜನ ರಾಹುಲ್‍ರನ್ನ ಟ್ರೋಲ್ ಮಾಡಿದ್ದಾರೆ.

Comments are closed.