ರಾಷ್ಟ್ರೀಯ

ಆಸ್ತಿಗಾಗಿ ಹೆತ್ತವರನ್ನೇ ಜೀವಂತ ಸುಟ್ಟ ಮಗ..! ಆಂಧ್ರ ಪ್ರದೇಶದ ಪೋತರೆಡ್ಡಿಯಲ್ಲಿ ನಡೆದ ಅಮಾನವೀಯ ಘಟನೆ

Pinterest LinkedIn Tumblr

fire

ವಿಜಯವಾಡ, ಜೂ.11: ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಹೆತ್ತ ಮಗನೇ ಪೋಷಕರನ್ನು ಮನೆಯಲ್ಲಿ ಕೂಡಿ ಹಾಕಿ ಸಜೀವದಹನಗೈದ ಅಮಾನವೀಯ ಘಟನೆ ಆಂಧ್ರ ಪ್ರದೇಶದ ಪೋತರೆಡ್ಡಿಯಲ್ಲಿ ನಡೆದಿದೆ.

ಆಸ್ತಿ ಸಂಬಂಧ ಮೇಲಿಂದ ಮೇಲೆ ಜಗಳ ನಡೆಯುತ್ತಲೇ ಇತ್ತು. ಮಾತಿಗೆ ಮಾತು ಬೆಳೆದ ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಹೆತ್ತಮಗ ಕೋಪಗೊಂಡ ಪೋಷಕರನ್ನು ಮನೆಯಲ್ಲಿ ಕೂಡಿಹಾಕಿ ಇಬ್ಬರನ್ನು ಸಜೀವ ದಹನಗೊಳಿಸಿ ಪರಾರಿಯಾಗಿದ್ದಾನೆ.

ಘಟನೆ ತಿಳಿದ ತಕ್ಷಣ ಕಾರ್ಯೇಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಂದ ದೇಹಗಳನ್ನು ಗ್ರಾಮಸ್ಥರ ನೆರವಿನಿಂದ ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಆರೋಪಿ ಪತ್ತೆಗೆ ಪೊಲೀಸರು ವ್ಯಾಪಕ ಜಾಲ ಬೀಸಿದ್ದಾರೆ. ಆಕ್ರಂದನ : ಈ ಘಟನೆ ಬಗ್ಗೆ ಕುಟುಂಬಸ್ಥರು ತೀವ್ರ ಆತಂಕ ವ್ಯಕ್ತಪಡಿಸಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಆರೋಪಿಯನ್ನು ಶೀಘ್ರ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಪೊಲೀಸ್ ಅಧಿಕಾರಿಗಳಲ್ಲಿ ಕುಟುಂಬ ವರ್ಗದವರು ಒತ್ತಾಯಿಸಿದ್ದಾರೆ.

Write A Comment