ಕನ್ನಡ ವಾರ್ತೆಗಳು

ಧನರಾಜ್ ಕೊಲೆಯತ್ನ ಪ್ರಕರಣ: ಆರೋಪಿಯ ಬಂಧನ

Pinterest LinkedIn Tumblr

Ullala_attack_dhanarj

ಮಂಗಳೂರು,ಮೇ.13: ತೊಕ್ಕೊಟ್ಟು ಟಿ.ಸಿ ರೋಡ್ ಸಮೀಪದ ನಿವಾಸಿ ಧನರಾಜ್ (25) ಎಂಬಾತನ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು,ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಬಂಧಿತ ಆರೋಪಿಯನ್ನು ಮಿಲ್ಲತ್ ನಗರದ ನಿವಾಸಿ ಪೈಝಿ ಯಾನೆ ಮುಹಮ್ಮದ್ ಪಯಾಝ್(20)ಎಂದು ಗುರುತಿಸಲಾಗಿದೆ.

ಎ.28 ರಂದು ಚಿಟ್ ಫಂಡ್ ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಧನರಾಜ್ ಬೈಕಿನಲ್ಲಿ ತೊಕ್ಕೊಟ್ಟು ಕಡೆಗೆ ತೆರೆಳುತ್ತಿದ್ದಾಗ ತೊಕೋಟ್ಟು ಟಿ.ಸಿ ರೋಡ್ ನಲ್ಲಿ ಮೂವರಿದ್ದ ಯುವಕರ ತಂಡ ತಲವಾರಿನಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದು ಇದು ಎ.25ರಂದು ನಡೆದ ಉಳ್ಳಾಲ ಕೋಡಿಯಲ್ಲಿ ನಫ್ಸಾನ್ ಹಾಗೂ ಎ.26ರಂದು ತೊಕ್ಕೊಟ್ಟು ಸಮೀಪದ ಸಫ್ವಾನ್ ಕೊಲೆಗೆ ಪ್ರತಿಕಾರವಾಗಿ ನಡೆದ ಕೊಲೆಯೆಂದು ಆರೋಪಿಯು ತಿಳಿದ್ದಾನೆ.ಹೆಚ್ಚಿನ ವಿವರ ನಿರೀಕ್ಷಿಸಿರಿ..

Write A Comment