ಮಂಗಳೂರು, ಮಾ.22 : ಕಟ್ಟಡ ಗುತ್ತಿಗೆದಾರರೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಪಲದಲ್ಲಿ ಸೋಮವಾರ ಸಂಭವಿಸಿದೆ.
ಕುಂಪಲದ ಚಿತ್ರಾಂಜಲಿ ನಗರ ನಿವಾಸಿ, ವೃತ್ತಿಯಲ್ಲಿ ಕಟ್ಟಡ ನಿರ್ಮಾಣ ಗುತ್ತಿಗೆದಾರರಾಗಿದ್ದ ಲಕ್ಷ್ಮಣ ಮೇಸ್ತ್ರಿ (62 ) ಮೃತ ವ್ಯಕ್ತಿ.
ನಿನ್ನೆ ಬೆಳಿಗ್ಗೆ ನಾಲ್ಕು ಗಂಟೆಯ ಸುಮಾರಿಗೆ ಎದ್ದು ಮನೆ ಹಿಂಬದಿಯ ಪಾಳುಕೋಣೆಗೆ ತೆರಳಿದ್ದ ಲಕ್ಷ್ಮಣ ಮೇಸ್ತ್ರಿ ಅಲ್ಲಿಯ ಫ್ಯಾನಿಗೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಸಮಸ್ಯೆಯಿಂದ ಬೇಸತ್ತು ಅವರು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.