ಕನ್ನಡ ವಾರ್ತೆಗಳು

ಪುರಭವನದ ಮುಂಭಾಗದ ವೃತ್ತಕ್ಕೆ ಕೆ.ಎನ್.ಟೇಲರ್ ಹೆಸರು : ತುಳುನಾಡ ರಕ್ಷಣಾ ವೇದಿಕೆ ಆಗ್ರಹ

Pinterest LinkedIn Tumblr

tulunadu_prtest_photo_1

ಮಂಗಳೂರು, ಮಾ.16 : ರಂಗಭೂಮಿಯ ಹಿರಿಯ ಹಾಗೂ ಖ್ಯಾತ ಕಲಾವಿದ ತುಳು ಚಿತ್ರ ರಂಗಕ್ಕೆ ಅನನ್ಯ ಕೊಡುಗೆ ನೀಡಿದ ತುಳು ಚಿತ್ರನಟ ಕೆ.ಎನ್.ಟೇಲರ್ ಅವರ ಹೆಸರನ್ನು ನಗರದ ಪುರಭವನದ ಮುಂಭಾಗದ ವೃತ್ತಕ್ಕೆ ಇಡಬೇಕು ಎಂದು ತುಳುನಾಡ ರಕ್ಷಣಾ ವೇದಿಕೆ ಆಗ್ರಹಿಸಿದೆ.

ಈ ಬಗ್ಗೆ ಬುಧವಾರ ಮಂಗಳೂರಿನ ಪುರಭವನದ ಎದುರು ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ತುರವೇ ಸ್ಥಾಪಕಾಧ್ಯಕ್ಷ ಯೋಗಿಶ್ ಶೆಟ್ಟಿ ಜೆಪ್ಪು ಮಾತನಾಡಿ, ನಗರದ ಪುರಭವನದ ಮುಂಭಾಗದ ವೃತ್ತಕ್ಕೆ ಇತ್ತೀಚಿಗೆ ದೈವಧೀನರಾದ ತುಳು ಚಿತ್ರನಟ ಕೆ.ಎನ್.ಟೇಲರ್ ಅವರ ಹೆಸರನ್ನು ಇಡಬೇಕು ಹಾಗೂ ಆ ವೃತ್ತದಲ್ಲಿ ಅವರ ಪ್ರತಿಮೆ ಸ್ಥಾಪಿಸ ಬೇಕು ಎಂದು ಒತ್ತಾಯಿಸಿದರು.

tulunadu_prtest_photo_2 tulunadu_prtest_photo_3 tulunadu_prtest_photo_4

ತುಳುನಾಡ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ರಾವ್ ಕಡಬ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಸಿರಾಜ್ ಅಡ್ಕರ್ ಮುಂತಾದವರು ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದರು.

ಪ್ರತಿಭಟನಾ ಸಭೆಯ ಬಳಿಕ ವೇದಿಕೆಯ ನಿಯೋಗವು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಸಲ್ಲಿಸಿತು. ಜೊತೆಗೆ ಈ ಬಗ್ಗೆ ತ್ವರಿತ ನಿರ್ಧಾರ ಕೈಗೊಳ್ಳುವಂತೆ ಮಂಗಳೂರು ಮಹಾನಗರ ಪಾಲಿಕೆಗೂ ಮನವಿ ಸಲ್ಲಿಸಲಾಯಿತು.

Write A Comment