ಉಳ್ಳಾಲ. ಮಾ, 06: ಪ್ರವಾದಿ ಲೋಕಕ್ಕೆ ಸಾರಿದಾಗೆ ಔಲಿಯಗಳನ್ನು ಸ್ಮರಿಸುವುದು ನಮ್ಮೆಲ್ಲ ಕರ್ತವ್ಯ ಎಂದು ಅಸ್ಸಯ್ಯಿದ್ ಅಲ್ಹಾಮಿದ್ ತಂಙಳ್ ಉದ್ಯಾವರ ಹೇಳಿದರು.
ಅವರು ಮಾ, 05 ರಿಂದ 13 ವರೆಗೆ ನಡೆಯಲಿರುವ ಕಟ್ಟತ್ತಿಲ ಮಖಾಂ ಉರೂಸ್ ಮುಬಾರಕ್ ಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಜಿ.ಪಂ ಸದಸ್ಯ ಎಂ.ಎಸ್ ಮುಹಮ್ಮದ್ ಉರೂಸ್ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದರು, ತಾ.ಪಂ ಸದಸ್ಯ ಅಬ್ಬಾಸ್ ಅಲಿ, ಗ್ರಾ.ಪಂ ಸದಸ್ಯ ಎ.ಸಿ.ಎಂ ಸಾಲೆತ್ತೂರ್, ಕೊಳ್ನಾಡು ಗ್ರಾ.ಪಂ ಸದಸ್ಯ ಎ.ಬಿ ಅಬ್ದುಲ್ಲಾ, ಕಟ್ಟತ್ತಿಲ ಜುಮಾ ಮಸೀದಿ ಖತೀಬ್ ಅಬ್ದುಲ್ ಜಲೀಲ್ ಸಖಾಫಿ ನೀಲಗಿರಿ, ಕಟ್ಟತ್ತಿಲ ಜುಮಾ ಮಸೀದಿ ಗೌರವಾಧ್ಯಕ್ಷ ಕೆ.ಎಂ ಉಮಾರ್ ಮದನಿ, ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಅಗರಿ, ಕೋಶಾಧಿಕಾರಿ ಕೆ.ಪಿ ಅಬ್ದುಲ್ ಖಾದರ್, ಉಪಾಧ್ಯಕ್ಷ ಎನ್.ಮುಹಮ್ಮದ್ ಮದನಿ ಅಲ್-ಮಾಸ್, ಪ್ರ.ಕಾರ್ಯಶಿ ಪಿ.ಇಬ್ರಾಹೀಂ ನಾಟೆಕಲ್ಲು ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.
ಕಾರ್ಯದಿರ್ಶಿ ಕೆ.ಎಂ ಮುಹ್ಯುದ್ದೀನ್ ಮದನಿ ಸ್ವಾಗತಿಸಿದರು. ಸದರ್ ಮುಹಲ್ಲಿಂ ಹೈದರ್ ಅಶ್ರಫಿ ಕಾರ್ಯಕ್ರಮ ನಿರೂಪಿಸಿದರು.