ಮಂಗಳೂರು,ಡಿ.07 : ಚೆನೈ ಮಹಾ ನೆರೆಯ ದುರಂತದ ಸಂತ್ರಸ್ತರ ಕ್ಷೇಮಕ್ಕಾಗಿ ಹಾಗೂ ಲೋಕಕಲ್ಯಾಣಾರ್ಥಕ್ಕಾಗಿ ಶ್ರೀಕ್ಷೇತ್ರ ಕದ್ರಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಕಾರ್ತಿಕ ಸೋಮವಾರವಾದ ಇಂದು ಶ್ರೀ ಎ.ಜೆ. ಶೆಟ್ಟಿಯವರ ನೇತೃತ್ವದಲ್ಲಿ ಕ್ಷೇತ್ರದ ತಂತ್ರಿಗಳಾದ ವಿಠಲದಾಸ ತಂತ್ರಿಗಳು, ಪ್ರಧಾನ ಅರ್ಚಕರಾದ ರಾಮಚಂದ್ರ ಅಡಿಗರು ಮಹಾರುದ್ರಾಭಿಷೇಕ ನೆರವೇರಿಸಿದರು.
ಶ್ರೀ ಎಸ್. ಪ್ರದೀಪ ಕುಮಾರ ಕಲ್ಕೂರ ಅವರ ಮಾರ್ಗದರ್ಶನದಲ್ಲಿ ಜರಗಿದ ಈ ಪ್ರಾರ್ಥನೆಯ ಸಂದರ್ಭದಲ್ಲಿ ದೇಳದ ಆಡಳಿತ ಕಾರ್ಯನಿರ್ವಾಹಣಾಧಿಕಾರಿ ನಿಂಗಯ್ಯ, ಆಡಳಿತಾಧಿಕಾರಿ ಶ್ರೀನಿವಾಸ, ಪ್ರಭಾರ ಕಾರ್ಯನಿರ್ವಹಣಾಧಿಕಾರಿ ರಾಜು ಮೊಗವೀರ, ಕೃಷ್ಣ ಜನ್ಮೋತ್ಸವ ಸಮಿತಿಯ ದಿನೇಶ್ ದೇವಾಡಿಗ ಕದ್ರಿ, ರೋಹಿತ್ದಾಸ್ ಕದ್ರಿ, ಗೋಕುಲ್ ಕದ್ರಿ, ಕಿರಣ್ ಕುಮಾರ್ ಜೋಗಿ, ಸುಧಾಕರ ರಾವ್ ಪೇಜಾವರ, ಶ್ರೀಮತಿ ನಿವೇದಿತಾ ಶೆಟ್ಟಿ, ಶ್ರೀಮತಿ ವಿಜಯಲಕ್ಷ್ಮೀ ಬಿ. ಶೆಟ್ಟಿ, ಶ್ರೀಮತಿ ಕಾತ್ಯಾಯಿನಿ, ದಯಾಕರ ಮೆಂಡನ್, ರಾಘವೇಂದ್ರ ಅಡಿಗರು, ಪ್ರಭಾಕರ ಅಡಿಗರು ಇನ್ನಿತರರು ಉಪಸ್ಥಿತರಿದ್ದರು.