ಕನ್ನಡ ವಾರ್ತೆಗಳು

ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಾಪಾಸ್ ನೀಡಿದ ಆರ್‍.ಕೆ. ಮಣಿಪಾಲ್

Pinterest LinkedIn Tumblr

R.K. Manipal_Returns_Award

ಉಡುಪಿ: ದೇಶದಲ್ಲಿ ಅಸ್ಹಿಷ್ಣುತೆಯನ್ನು ಪ್ರತಿಭಟಿಸಿ ಸಾಹಿತಿ, ಕವಿ ಆರ್.ಕೆ. ಮಣಿಪಾಲ್ ಅವರು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸಿದ್ದಾರೆ. ರಾಜ್ಯ ಅಕಾಡೆಮಿ 2008ರಲ್ಲಿ ಆರ್.ಕೆ. ಅವರು ‘ವಿಮರ್ಶೆಯ ಸವಾಲು’ ಗ್ರಂಥಕ್ಕೆ ಪ್ರಶಸ್ತಿ ನೀಡಿತ್ತು. ‘ಅಸಹಿಷ್ಣುತೆ ಹೆಚ್ಚುತ್ತಿದೆ. ಆಹಾರ, ವಿಚಾರ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತಿದ್ದರೂ ಅಕಾಡೆಮಿ ಈ ಬಗ್ಗೆ ಖಂಡಿಸಿಲ್ಲ.

ಆದ್ದರಿಂದ ಪ್ರಶಸ್ತಿಯನ್ನು ಅ. 30ರಂದು ವಾಪಸು ಕಳುಹಿಸಿ ಪತ್ರ ಬರೆದೆ. 5000 ರೂ. ನಗದನ್ನೂ ಚೆಕ್ ಮೂಲಕ ಕಳುಹಿಸಿದ್ದೇನೆ’ ಎಂದು ಆರ್.ಕೆ. ಅವರು ತಿಳಿಸಿದ್ದಾರೆ.

Write A Comment