ಕನ್ನಡ ವಾರ್ತೆಗಳು

ಶಂಕರನಾರಾಯಣ: ಅಕ್ರಮ ದನ ಸಾಗಾಟ, ಆರೋಪಿ ಬಂಧನ- 2 ದನಗಳ ರಕ್ಷಣೆ

Pinterest LinkedIn Tumblr

Bramhavara_Cow_Theaft

ಉಡುಪಿ: ಅಕ್ರಮವಾಗಿ ಎರಡು ದನಗಳನ್ನು ಪಿಕಪ್ ವಾಹನದಲ್ಲಿ ಹಿಂಸಾತ್ಮಕವಾಗಿ ತುಂಬಿಕೊಂಡು ಹೋಗುತ್ತಿದ್ದ ವೇಳೆ ಸ್ಥಳಿಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನೇರಳಕಟ್ಟೆ – ಅಂಪಾರು ರಸ್ತೆಯಲ್ಲಿ ನಡೆದಿದೆ.

ಪೊನ್ನಯ್ಯ @ ಮನು ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.

ಆರೋಪಿಯು KA 15 8306 ನಂಬ್ರದ ಮಹೀಂದ್ರ ಮ್ಯಾಕ್ಸಿಮೋ ಪಿಕಪ್‌ವಾಹನದಲ್ಲಿ 2 ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಪಿಕಪ್‌ವಾಹನದ ಬೋಡಿಯಲ್ಲಿ ಹಗ್ಗದಿಂದ ಕಟ್ಟಿ ಮಾಂಸ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದನ್ನು ಗಮನಿಸಿದ ಓರ್ವರು ಸ್ನೇಹಿತರಿಗೆ ತಿಳಿಸಿದ್ದು ಇದೇ ಸಂದರ್ಭ ಎಚ್ಚೆತ್ತುಕೊಂಡ ಅವರು ಅಂಪಾರು ಭಾಗದಲ್ಲಿ ಪಿಕಪ್ ವಾಹನವನ್ನು ಅಡ್ಡಗಟ್ಟಿ ಆರೋಪಿಯನ್ನು ಹಿಡಿದು ದನಗಳನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ದನಗಳ ಒಟ್ಟು ಮೌಲ್ಯ ಸುಮಾರು 40,000/- ರೂಪಾಯಿ ಆಗಿದ್ದು ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

(ಸಾಂದರ್ಭಿಕ ಚಿತ್ರ)

Write A Comment