ಕುಂದಾಪುರ: ಅಂಗಡಿಯೊಂದಕ್ಕೆ ಬೆಳಿಗ್ಗೆನ ಜಾವದ ವೇಳೆ ನುಗ್ಗಿ ಸಿಗರೇಟ್ ಕಳ್ಳತನ ಮಾಡಿದ ವ್ಯಕ್ತಿಯೋರ್ವನನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.
ಮುಳ್ಳಿಕಟ್ಟೆ ಸಮೀಪದ ಹೊಸಾಡು ನಿವಾಸಿ ಪ್ರಸಾದ್ ಖಾರ್ವಿ(21) ಬಂಧಿತ ಆರೋಪಿಯಾಗಿದ್ದಾನೆ.
ಘಟನೆ ಹಿನ್ನೆಲೆ: ನ.3 ರಂದು ಬೆಳ್ಳಿಗ್ಗೆನ ಜಾವ 3:00 ಗಂಟೆಗೆ ತ್ರಾಸಿ ಜಂಕ್ಷನ್ ಬಳಿ ಇರುವ ತೇಜಾ ದೇವಾಡಿಗ ಅವರು ವಿಶ್ವಾಸ ಜನರಲ್ ಸ್ಟೋರ್ ನಲ್ಲಿ ಮಲಗಿರುವ ಸಮಯ ಮಾಡಿನ ಮೇಲಿನಿಂದ ಕೆಳಗಡೆ ಯಾರೋ ಜಿಗಿದ ಶಬ್ದ ಕೇಳಿ ಎಚ್ಚರ ಗೊಂಡು ನೋಡಿದಾಗ ಆರೋಪಿ ಪ್ರಸಾದ್ ಖಾರ್ವಿ ಎಂಬುವವನು ಅಂಗಡಿಯ ಮಾಡಿನ ಮೇಲಿಂದ ಅಂಗಡಿಯ ಒಳ ಹೊಕ್ಕಿ 6,500/- ರೂಪಾಯಿ ಮೌಲ್ಯದ 5 ಬಂಡಲ್ ಕಿಂಗ್ಸ್ ಸಿಗರೇಟನ್ನು ಕಳವು ಮಾಡಿಕೊಂಡು ಹೋಗಿದ್ದ. ಈ ಬಗ್ಗೆ ಅಂಗಡಿ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದರು.
ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಮರವಂತೆ ಬೀಚ್ ಸಮೀಪ ಬಂಧಿಸಿದ್ದು ಸಿಗರೇಟ್ ಬಂಡಲುಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ: ಗಂಗೊಳ್ಳಿಯಲ್ಲೊಬ್ಬ ಸಿಗರೇಟ್ ಕಳ್ಳ..! ಅಂಗಡಿ ನುಗ್ಗಿ ಕಿಂಗ್ಸ್ ಸಿಗರೇಟ್ ಕದ್ದ ಮಳ್ಳ..!

