ಬೆಳ್ತಂಗಡಿ,ಜೂನ್.01: ಎರಡು ತಿಂಗಳ ಹಿಂದೆ ಬೆಂಕಿಗೆ ಆಹುತಿಯಾದ ಬಾಲಕಿ ಭಾಗ್ಯಶ್ರೀಯ ತಂದೆ ರಾಮಣ್ಣ ಸಾಲಿಯಾನ್ ತನ್ನ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಎಪ್ರಿಲ್ 6 ರಂದು ಮರೋಡಿಯಲ್ಲಿ ಇವರ ಮಗಳು ಕಾಲೇಜು ವಿಧ್ಯಾರ್ಥಿನಿ ಭಾಗ್ಯಶ್ರೀ ತನ್ನ ಮನೆಯಲ್ಲಿ ಬೆಂಕಿ ತಗುಲಿ ಮೃತಪಟ್ಟಿದ್ದಳು. ಇದು ವಿವಾದಗಳಿಗೆ ಕಾರಣವಾಗಿ ಕೊನೆಗು ಪೋಲೀಸ್ ತನಿಖೆಯಲ್ಲಿ ಆಕೆ ಪ್ರೇಮ ಪ್ರಕರಣದಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ಬಹಿರಂಗ ಗೊಂಡಿತ್ತು.
ಇದೀಗ ಇದೇ ಮನೆಯಲ್ಲಿ ಆಕೆಯ ತಂದೆಯು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳ ಸಾವಿನ ನೋವಿನಿಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೆ ಅಧವಾ ಇನ್ಯಾವುದೇ ಕಾರಣವಿದೆಯೆ ಎಂಬುದು ತನಿಖೆಯಿಂದಷ್ಟೆ ತಿಳಿಯಬೇಕಾಗಿದೆ ವೇಣೂರು ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.