ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್
ಮುಂಬಯಿ : ಉದ್ಯಮಿ ಮುದ್ರಾಡಿ ದಿವಾಕರ ಶೆಟ್ಟಿಯವರ ಸಾಗರ್ ಡೆವಲಪರ್ಸ ವತಿಯಿಂದ ಅಂಧೇರಿ ಪೂರ್ವ ಗೊಂಧೋಳಿಯ ಮಹಾನಗರ ಪಾಲಿಕೆಯ ಕಚೇರಿಯ ಹಿಂಬಾಗದಲ್ಲಿರುವ ಜೋಪಡಿ ನಿವಾಸಿಗಳಿಗೆ ಮೇ 14ರಂದು ದಿವಾಕರ ಶೆಟ್ಟಿಯವರ ಹುಟ್ಟು ಹಬ್ಬದ ಸಂದರ್ಭ ಸುಮಾರು 250 ನಿವೇಶನವನ್ನು ಜೋಪಡಿದಾರರಿಗೆ ಹಸ್ತಾಂತರಿಸಿದರು.
17 ಮಹಡಿಗಳ 3 ಕಟ್ಟಡಗಳಲ್ಲಿ ಎಲ್ಲಾ ಸವಲತ್ತುಗಳನ್ನು ನೀಡಲಾಗಿದ್ದು ನಿವಾಸಿಗಳ ಬಹುದಿನಗಳ ಕನಸು ನನಸಾಗಿದೆ. ಈ ಸಂದರ್ಭದಲ್ಲಿ ಅವರ ಪುತ್ರ ಸಾಗರ್ ಡಿ. ಶೆಟ್ಟಿ, ದಿನೇಶ್ ಪುನೀಯಾ, ಸುಲೀಲ್ ದಾಂಗೆ ಮೊದಲಾದವರು ಉಪಸ್ಥಿತರಿದ್ದರು.