ಕನ್ನಡ ವಾರ್ತೆಗಳು

ಮಹಿಳೆಯ ಮನೆಗೆ ಕಲ್ಲು, ನಿತ್ಯ ಕಿರುಕುಳ : ಮಹಿಳೆಯಿಂದ ವಿಷಪ್ರಾಶನ : ಆಸ್ಪತ್ರೆಗೆ ದಾಖಲು

Pinterest LinkedIn Tumblr

ಕುಂದಾಪುರ : ಕುಡಿದ ಅಮಲಿನಲ್ಲಿದ್ದ ಯುವಕನೊಬ್ಬ ಬಾಡಿಗೆ ಮನೆಯಲ್ಲಿದ್ದ ಮಹಿಳೆಯೊಬ್ಬರಿಗೆ ನಿತ್ಯ ಕಿರುಕುಳ ನೀಡಿದ್ದು ಮಾತ್ರವಲ್ಲದೇ ಮಹಿಳೆಯ ಮನೆಗೆ ಕಲ್ಲು ಹೊಡೆದ ಅವಾಚ್ಯವಾಗಿ ಬಹಿರಂಗವಾಗಿ ನಿಂದಿಸಿದ ಪರಿಣಾಮ ಮನನೊಂದ ಮಹಿಳೆಯೊಬ್ಬರು ವಿಷ ಶೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ತಲ್ಲೂರು ಸಮೀಪ ನಡೆದಿದೆ.

Lady_Suiside_Attempt

ಘಟನೆಯ ವಿವರ: ತಲ್ಲೂರು ಸಮೀಪದ ಬಾಡಿಗೆ ಮನೆಯೊಂದರಲ್ಲಿ ಕಳೆದ ಒಂದು ವರ್ಷದಿಂದ ಮಹಿಳೆಯೊಬ್ಬರು ವಾಸವಾಗಿದ್ದರು. ಈಕೆಯ ಪತಿ ಖಾಸಗಿ ವಾಹನವೊಂದ ಚಾಲಕರಾಗಿದ್ದು, ಆಗಾಗ ಮನೆಗೆ ಬರುತ್ತಿದ್ದರು. ಈಕೆ ಐದು ವರ್ಷದ ಮಗುವಿದ್ದು, ಸಮೀಪ ವಾಸಿ ಸುದರ್ಶನ(೨೧) ಎಂಬಾತ ನಿರಂತರವಾಗಿ ಕಿರುಕುಳ ನೀಡುತ್ತಿದ್ದನೆನ್ನಲಾಗಿದೆ.

ಬುಧವಾರ ರಾತ್ರಿಯೂ ಇದೇ ರೀತಿ ಕಿರುಕುಳ ನೀಡಿದ್ದು, ಶುಕ್ರವಾರ ಮಧ್ಯಾಹ್ನ ಮನೆಯೆದುರಿಗೆ ಬಂದ ಸುದರ್ಶನ ಕಿರುಕುಳ ನೀಡಿದ್ದನೆನ್ನಲಾಗಿದೆ. ಅಲ್ಲದೇ ಸಾರ್ವಜನಿಕರಿಗೆ ಕೇಳುವಂತೆ ಅವಾಚ್ಯವಾಗಿ ನಿಂದಿಸಿದ್ದನೆನ್ನಲಾಗಿದೆ. ಇದರಿಂದ ಸುತ್ತಮುತ್ತಲಿನವರು ತನ್ನ ಬಗ್ಗೆ ಕೆಟ್ಟದಾಗಿ ತಿಳಿದುಕೊಳ್ಳುತ್ತಾರೆ ಮತ್ತು ಗಂಡ ತನ್ನ ಮೇಲೆ ಅನುಮಾನಪಡುತ್ತಾನೆಂದು ಮನನೊಂದು ಮಧ್ಯಾಹ್ನ ಕೀಟನಾಶಕವನ್ನು ಸೇವಿಸಿದ್ದಾಳೆ. ನಂತರ ಈಕೆಯ ಮನೆ ಸಮೀಪದ ಸುದರ್ಶನನ ಸ್ನೇಹಿತರಿಬ್ಬರಿಗೆ ಫೋನ್ ಮಾಡಿ ತಾನು ವಿಶಸೇವಿಸಿದ್ದ ಬಗ್ಗೆ ಮಾಹಿತಿ ನೀಡಿದ್ದಾಳೆ.

ತಕ್ಷಣ ಪರಿಸ್ಥಿತಿ ಅರಿತ ಅವರು ಆಕೆಯನ್ನು ಫೋನ್‌ನಲ್ಲಿಯೇ ಸಮಾಧಾನಿಸಲು ಯತ್ನಿಸಿದರಾದರೂ ಅದಾಗಲೇ ವಿಶಸೇವಿಸಿದ್ದರಿಂದ ಆಕೆ ಅಸ್ವಸ್ಥಳಾಗಿದ್ದಳು. ವಿಚಾರ ಹಬ್ಬುತ್ತಿದ್ದಂತೆ ಕೂಂದಾಪುರದಿಂದ ತಲ್ಲೂರಿನತ್ತ ಸಾಗುತ್ತಿದ್ದ ಸುದರ್ಶನ ಆಕೆಯ ಮನೆಗೆ ಧಾವಿಸಿದ್ದು, ಬಲವಂತವಾಗಿ ಆಕೆಗೆ ವಾಂತಿ ಮಾಡಿಸಿ ನಂತರ ಕುಂದಾಪುರ ಸರ್ಕಾರೀ ಆಸ್ಪತ್ರೆಗೆ ಸೇರಿಸಿದ್ದಾನೆ. ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾಳೆ.

ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ಹೇಳಿಕೆಯ ಆಧಾರದಲ್ಲಿ ಪೊಲೀಸರು ಆರೋಪಿ ಸುದರ್ಶನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Write A Comment