ಮಂಗಳೂರು,ಜ.13: ದ.ಕ ಜಿಲ್ಲಾ ಪಂಚಾಯತ್ ಯುವ ಸಶಕ್ತಿಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಸರಕಾರಿ ನೌಕರರ ಸಂಘದ ಅಶ್ರಯದಲ್ಲಿ ಸೋಮವಾರ ಮಂಗಳಾ ಕ್ರೀಂಡ್ರಾಗಣದಲ್ಲಿ ರಾಜ್ಯ ಸರಕಾರಿ ನೌಕರರಾ ಕ್ರೀಡಾಕೂಟಕ್ಕೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ್ ರೈ ಹಾಗೂ ಕ್ರೀಡಾ ಸಚಿವ ಅಭಯಚಂದ್ರ ಜೈನ್ ಅವರು ಗುಂಡು ಹಾಗೂ ಜಾವೆಲಿನ್ ಎಸೆಯುವ ಮೂಲಕ ಈ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಸಚಿವರಿಬ್ಬರು ಗುಂಡು ಎಸೆತ ಜಾವೇಲಿನ್ ಎಸೆತ ಮಾಡಿ ಎಲ್ಲರಿಗೆ ಅಶ್ಚರ್ಯ ಚಕಿತರನ್ನಾಗಿ ಮಾಡಿದರು. ದ.ಕ ಜಿಲ್ಲಾ ಜಿಲ್ಲಾಧಿಕಾರಿಯು ಕೂಡ ಈ ಸಚಿವರಿಬ್ಬರು ಗುಂಡು ಎಸೆದ ದೂರಕ್ಕಿಂತ ಜಾಸ್ತಿ ದೂರ ಎಸೆದು ತನ್ನ ಶಕ್ತಿಯನ್ನು ಪ್ರದರ್ಶಿಸಿದರು.