ಕುಂದಾಪುರ: ರಾಜ್ಯ ಬಾಲ ಭವನ ಸೊಸೈಟಿ, ಬಾಲಾವಿಕಾಸ ಅಕಾಡೆಮಿ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಬಾಲಭವನ ಸಮಿತಿ ವತಿಯಿಂದ ದಾವಣಗೆರೆಯಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ಕಲಾ ಉತ್ಸವದಲ್ಲಿ ಗಂಗೊಳ್ಳಿಯ ಮೇಘ ನಾಯ್ಕ್ಗೆ ಸೃಜನಾತ್ಮಕ ಚಿತ್ರಕಲೆಗೆ ’ಕಲಾಶ್ರೀ’ ಪ್ರಶಸ್ತಿ ಲಭಿಸಿದೆ.
ಎಸ್. ವಿ. ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿಯ ೮ನೇ ತರಗತಿ ವಿದ್ಯಾರ್ಥಿಯಾದ ಈಕೆ ಗಂಗೊಳ್ಳಿಯ ಸುಮಿತ್ರಾ ಮತ್ತು ಶಿವಾನಂದ ನಾಯ್ಕ್ ದಂಪತಿಯ ಪುತ್ರಿ ಹಾಗೂ ಕಲಾವಿದ ನೀರೆ ಹರೀಶ್ ಸಾಗಾ ಬಳಿ ಚಿತ್ರಕಲೆ ಕಲಿಯುತ್ತಿದ್ದಾರೆ.