ಕೊಟ್ಟೂರು: ಸ್ನೇಹಿತನ ಜತೆ ಸಹಕರಿಸಿದರೆ ಮಾತ್ರ ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರವೆಸಗಿ, ಆ ಫೋಟೊವನ್ನು ವಾಟ್ಸಾಪ್ನಲ್ಲಿ ಹಾಕಿದ್ದ ಇಬ್ಬರು ಯುವಕರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಅಂಬೇಡ್ಕರ್ ಕಾಲೋನಿಯ ಭರಮೇಶ ಬಸವರಾಜಪ್ಪ (19)
ಹಾಗೂ ಪರಶುರಾಮ ರಾಮಚಂದ್ರಪ್ಪ (21) ಬಂಧಿತ ಆರೋಪಿಗಳು. ಭರಮೇಶ, ಕಳೆದ ಐದಾರು ತಿಂಗಳಿಂದ ಯುವತಿಯೊಬ್ಬಳನ್ನು ಪ್ರೀತಿಸಿದ್ದ. ಮದುವೆ ಮಾಡಿಕೊಳ್ಳುವಂತೆ ಆಕೆ ಒತ್ತಾಯಿಸಿದಾಗ ತಾನಿನ್ನೂ ಅಪ್ರಾಪ್ತ ವಯಸ್ಕ ಎಂದು ನೆಪ ಹೇಳಿ ಮದುವೆಯನ್ನು ಮುಂದೂಡುತ್ತಾ ಬಂದಿದ್ದ.
ಇತ್ತೀಚೆಗೆ ಆಕೆಯ ಒತ್ತಾಯ ಜೋರಾಗಿತ್ತು. ತನ್ನನ್ನು ಮದುವೆ ಮಾಡಿಕೊಳ್ಳುವಂತೆ ಯುವತಿ ಒತ್ತಾಯ ಮಾಡಿದಾಗ, ಇದರಿಂದ ತಪ್ಪಿಸಿಕೊಳ್ಳಲು ಉಪಾಯ ಹೂಡಿದ. ಊರಿನ ಹೊರವಲಯದ ಮೆಕ್ಕೆಜೋಳದ ಹೊಲಕ್ಕೆ ಕರೆದೊಯ್ದ. ಅಲ್ಲಿಗೆ ತನ್ನ ಸ್ನೇಹಿತ
ಪರಶುರಾಮನನ್ನು ಕರೆ ತಂದು, ಆತನೊಂದಿಗೆ ಸಹಕರಿಸಿದರೆ ಮಾತ್ರ ಮದುವೆಯಾಗುವುದಾಗಿ ಬಲವಂತ ಮಾಡಿದ. ಇಬ್ಬರೂ ಸೇರಿ ಆಕೆಯ ಮೇಲೆ ಅತ್ಯಾಚಾರ ಎಸಗಿದರು.
ಅತ್ಯಾಚಾರ ನಡೆದದ್ದು ನ.5ರಂದು. ನಂತರ, ಯುವತಿ ಮತ್ತೆ ಮದುವೆಯ ವಿಷಯ ಪ್ರಸ್ತಾಪಿಸಿದಾಗ ಅತ್ಯಾಚಾರದ ಫೋಟೊವನ್ನು ವ್ಯಾಟ್ಸಾಪ್ ಮೂಲಕ ಇತರರಿಗೂ ತಿಳಿಸುವುದಾಗಿ ಬೆದರಿಸಲು ಆರಂಭಿಸಿದ್ದ. ಈ ಮಧ್ಯೆ, ಅತ್ಯಾಚಾರದ ಫೋಟೊ ವಾಟ್ಸಾಪ್ನಲ್ಲಿ ಬಯಲಾಗಿತ್ತು. ಇದರಿಂದ ಮನನೊಂದ ಯುವತಿ, ಆರೋಪಿಗಳ ವಿರುದಟಛಿ ಕೊಟ್ಟೂರು ಪೊಲೀಸ್ ಠಾಣೆಗೆ ದೂರು ನೀಡಿದಳು. ದೂರು ದಾಖಲಿಸಿಕೊಂಡ
ಪೊಲೀಸರು ಭಾನುವಾರ ಆರೋಪಿಗಳನ್ನು ಬಂಧಿಸಿದ್ದಾರೆ.
-ಉದಯವಾಣಿ