ಮೈಸೂರು,ನ.16- ಮಾರಣಾಂತಿಕ ಕಾಯಿಲೆ ಇರುವ ವಿಷಯವನ್ನು ಮುಚ್ಚಿಟ್ಟು 10 ಲಕ್ಷ ರೂ. ವರದಕ್ಷಿಣೆ ಪಡೆದು ವಿವಾಹವಾಗಿ ವಂಚಿಸಿದ್ದಾರೆ ಎಂದು ನೊಂದ ಗೃಹಿಣಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಗರದ ಸಿದ್ದಲಿಂಗೇಶ್ವರ ಬಡಾವಣೆ ನಿವಾಸಿ ನರೇಂದ್ರಬಾಬು ಅವರಿಗೆ ಮಾರಣಾಂತಿಕ ಕಾಯಿಲೆ ಇದ್ದರೂ ಸಹ ಈ ವಿಷಯವನ್ನು ಮುಚ್ಚಿಟ್ಟು 2014ರ ಡಿಸೆಂಬರ್ ತಿಂಗಳಿನಲ್ಲಿ ವಿವಾಹವಾಗಿದ್ದರು.
ಮದುವೆಯಾದ ನಂತರ ಮಾರಣಾಂತಿಕ ಕಾಯಿಲೆ ಇರುವುದನ್ನು ತಿಳಿದ ಪತ್ನಿ ಸುಳ್ಳು ಹೇಳಿ ಏಕೆ ವಿವಾಹವಾದಿರಿ ಎಂದು ಪತಿಯನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.