ಕುಂದಾಪುರ: ಬಸ್ರೂರಿನ ತೆಂಕಬಾಗಿಲು ಎಂಬಲ್ಲಿ ಎರೆಡೆರಡು ಪತ್ನಿಯರನ್ನು ಹೊಂದಿದ್ದ ಕಟ್ ಬೆಲ್ತೂರಿನ ಹರೆಗೋಡು ನಿವಾಸಿ ನರಸಿಂಹ ಆಚಾರ್ಯರ ಪುತ್ರ ಭಾಸ್ಕರ ಆಚಾರ್ಯ (33) ಎಂಬವನು ತನ್ನ ಎರಡನೇ ಪತ್ನಿಯ ಮನೆಯಲ್ಲಿ ನೇಣು ಬಿಗಿದು ಸಾವಿಗೆ ಶರಣಾದ ಘಟನೆ ನಡೆದಿದೆ. ಭಾಸ್ಕರ್ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು ಆತನ ಮೊದಲ ಪತ್ನಿ ಇದೊಂದು ವ್ಯವಸ್ಥಿತ ಕೊಲೆ ಎಂಬ ಆರೋಪ ಮಾಡಿದ್ದರಿಂದ ಭಾಸ್ಕರ್ ಶವವನ್ನು ಮರಣೋತ್ತರ ಪರೀಕ್ಷೆಗೆ ಮಣಿಪಾಲ ಕೆ.ಎಂ.ಸಿ. ಗೆ ಕಳುಹಿಸಲಾಗಿದೆ.
ಕ್ರೈಸ್ತ ಯುವತಿಯೊಂದಿಗೆ ಪ್ರೇಮ ವಿವಾಹ
ಸೌಂಡ್ಸ್ ಮತ್ತು ಲೈಟಿಂಗ್ಸ್ ಕೆಲಸ ನಿರ್ವಹಿಸುತ್ತಿದ್ದ ಭಾಸ್ಕರ ಆಚಾರ್ಯ ಎಂಟು ವರ್ಷಗಳ ಹಿಂದೆ ಆನಗಳ್ಳಿ ಮೂಲದ ಕ್ರೈಸ್ತ ಧರ್ಮದ ಪ್ರೀತಾ ಎಂಬಾಕೆಯನ್ನು ಮದುವೆಯಾಗಿದ್ದು ಇದಕ್ಕೆ ಆತನ ಮನೆಯಲ್ಲಿಯೂ ವಿರೋಧವಿದ್ದ ಕಾರಣ ಪತ್ನಿಯೊಂದಿಗೆ ಬಾಡಿಗೆ ಮನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ.
ವಿವಾಹಿತ ಮುಸ್ಲೀಂ ಯುವತಿಯೊಂದಿಗೆ ಅಫೇರ್..
ಭಾಸ್ಕರ್ ನಡೆಸುತ್ತಿದ್ದ ಲೈಂಟಿಂಗ್ಸ್ ಅಂಗಡಿಯ ಹಿಂಬದಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಭಟ್ಕಳದ ಲಾರಿ ಚಾಲಕ ಅಬ್ದುಲ್ಲಾ ಎಂಬವರು ಪತ್ನಿ ಸಬಿಹಾಳೊಂದಿಗೆ ಭಾಸ್ಕರ್ ಲವ್ ಆರಂಭಿಸಿದ್ದ. ಇವರಿಬ್ಬರ ಅನ್ಯೋನ್ಯತೆ ಜಾಸ್ಥಿಯಾದಾಗ ಅಬ್ದುಲ್ಲಾ ಮತ್ತು ಸಬಿಹಾ ನಡುವೆ ಜಗಳ ಏರ್ಪಟ್ಟು ದೂರಾಗುತ್ತಾರೆ. ಸಬಿಹಾ ಭಾಸ್ಕರನನ್ನೇ ನೆಚ್ಚಿಕೊಂಡು ಆತನ ಹಿಂದೆ ಹೋಗಿಬಿಡುತ್ತಾಳೆ.
ಸಬಿಹಾ ಆದಳು ಚೈತ್ರಾ…
ಇನ್ನು ಭಾಸಕರನ ಜೊತೆ ಲಿವಿಂಗ್ ಇನ್ ಸಂಬಂದವನ್ನಿಟ್ಟುಕೊಂಡ ಸಬಿಹಾಗೆ ಮೊದಲೇ ೫ ವರ್ಷ ಪ್ರಾಯದ ಮಗುವಿತ್ತು. ಸಭಿಹಾ ಭಾಸ್ಕರ್ ಸಂಬಂದ ಬೆಳೆಸಿದ ತರುವಾಯದಲ್ಲಿ ಹಿಂದೂ ಧರ್ಮಕ್ಕೆ ಬದಲಾಗಿ ಚೈತ್ರಾ ಎಂದು ಹೆಸರನ್ನು ಬದಲಾಯಿಸಿಕೊಂಡಿದ್ದಳು.
ಎರಡನೇ ಪತ್ನಿ ಜೊತೆಗಿದ್ದ ಮನೆಯಲ್ಲಿ ನೇಣು
ಭಾಸ್ಕರ್ ಎರಡನೆ ಹೆಂಡತಿ ಜೊತೆ ವಾಸವಿದ್ದ ಬಸ್ರೂರು ಬಾಡಿಗೆ ಮನೆಯಲ್ಲಿ ನಿನ್ನೆ ರಾತ್ರಿ ಏಕಾಏಕಿ ಹಗ್ಗದಿಂದ ನೇಣು ಬಿಗಿದು ಸಾವನ್ನಪ್ಪಿದ್ದಾರೆ. ರಾತ್ರಿ ನನ್ನ ಜೊತೆಯಾಗಿ ಊಟ ಮಾಡಿದ್ದ ಭಾಸ್ಕರ್ ನಾನು ಬಾತ್ ರೂಂಗೆ ಹೋಗಿ ಬರುವಷ್ಟರಲ್ಲಿ ನೇಣು ಬಿಗಿದುಕೊಡಿದ್ದರು. ಅದನ್ನು ಕಂಡು ದಂಗಾದ ನಾನು ತಕ್ಷಣ ಅವರ ನೇಣಿನ ಹಗ್ಗ ಬಿಡಿಸಲು ಯತ್ನಿಸಿದ್ದೆ ಆದರೆ ನನ್ನಿಂದ ಸಾಧ್ಯವಾಗಿಲ್ಲ. ಅಕ್ಕಪಕ್ಕದ ಮನೆಯವರನ್ನು ಕೂಗಿ ಕರೆದೆ. ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದರು. ಆ ಕೂಡಲೇ ಅವರ ಮೊದಲ ಪತ್ನಿ ಪ್ರೀತಾಗೆ ಕೂಡ ಫೋನಾಯಿಸಿ ವಿಷಯ ತಿಳಿಸಿದ್ದೆ ಎಂದು ಸಬೀಹಾ ಅಲಿಯಾಸ್ ಚೈತ್ರಾ ಹೇಳಿದ್ದಾಳೆ.
.
ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
Comments are closed.