ಬೆಂಗಳೂರು,ಏ.೨೧-ನಕಲಿ ಕೀ ಬಳಸಿ ವಕೀಲರೊಬ್ಬರ ಮನೆಗೆ ಹಾಡುಹಗಲೇ ನುಗ್ಗಿರುವ ದುಷ್ಕರ್ಮಿಗಳು ೧೦ಲಕ್ಷ ೭೦ ಸಾವಿರ ನಗದು ೧ಕೆಜಿ ೬೦೦ ಗ್ರಾಂ ಚಿನ್ನ,೬ಕೆಜಿ ಬೆಳ್ಳಿ ಆಭರಣಗಳು ಸೇರಿ ಲಕ್ಷಾಂತರ ಮೌಲ್ಯದ ಮಾಲುಗಳನ್ನು ದೋಚಿ ಪರಾರಿಯಾಗಿದ್ದಾರೆ.
ಅಮೃತನಗರದ ಎಸೆಕ್ಟರ್ನ ವಕೀಲ ಸುರೇಶ್ ಲಾಥೂರ್ ಅವರು ನಿನ್ನೆ ಬೆಳಿಗ್ಗೆ ೧೦ರ ವೇಳೆ ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಹೊರಹೋಗಿ ಸಂಜೆ ವೇಳೆಗೆ ಪಾಪಸಾಗಿದ್ದಾರೆ.
ಅಷ್ಟರಲ್ಲಿ ಅವರ ಮನೆಗೆ ನಕಲಿ ಕೀ ಬಳಸಿ ಒಳನುಗ್ಗಿರುವ ದುಷ್ಕರ್ಮಿಗಳು ಬೀರುವಿನಲ್ಲಿನಲ್ಲಿದ್ದ ೧೦ಲಕ್ಷ ೭೦ ಸಾವಿರ ಹಣ, ೧ಕೆಜಿ ೬೦೦ಗ್ರಾಂ ಚಿನ್ನ ದೇವರ ಮನೆಯಲ್ಲಿದ್ದ ೬ಕೆಜಿ ಬೆಳ್ಳಿ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ವಕೀಲರ ಮನೆಯಲ್ಲಿ ನೇಪಾಲ ಮೂಲದ ಸೆಕ್ಯೂರಿಟಿ ಗಾರ್ಡ್ ಕಾವಲಿಗಿದ್ದು ಆತನೇ ಮನೆಯ ಕೀಗಳನ್ನು ಕಳವು ಮಾಡಿ ನಕಲಿ ಕೀ ಮಾಡಿಸಿಕೊಂಡು ಈ ಕೃತ್ಯವೆಸಗಿರುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಪರಾರಿಯಾಗಲು ಯತ್ನಿಸಿದ್ದ ಸೆಕ್ಯೂರಿಟಿ ಗಾರ್ಡ್ನನ್ನು ವಶಕ್ಕೆ ತೆಗೆದುಕೊಂಡಿರುವ ಅಮೃತಹಳ್ಳಿ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ಡಿಸಿಪಿ ಡಾ.ಹರ್ಷ ಅವರು ತಿಳಿಸಿದ್ದಾರೆ.
Uncategorized