ಉಡುಪಿ: ಕಂದಾಯ ಇಲಾಖೆಯ ಕಛೇರಿ ಸರಿಯಾಗಿ ಕೆಲಸ ಮಾಡಿದರೇ ಸರಿಸುಮಾರು 50% ಕಂದಾಯ ಇಲಾಖೆಯ ಎದುರಿಸುತ್ತಿರವ ಸಮಸ್ಯೆಗೆ ಪರಿಹಾರ ಸಿಕ್ಕಿದಂತೆ ಎಂದು ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ರಾಜ್ಯದ ಸಚಿವ ಸ್ಥಾನಮಾನದೊಂದಿಗೆ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡು ಬೆಂಗಳೂರಿನ ವಿಧಾನ ಸಭಾ ಅಧೀವೇಶನ ಮುಗಿಸಿಕೊಂಡು ಉಡುಪಿಗೆ ಕಾಂಗ್ರೆಸ್ ಭವನಕ್ಕೆ ಆಗಮಿಸಿದ ಸಂಧರ್ಭದಲ್ಲಿ ಮಾತನಾಡಿದ ಅವರು ತಾನು ಬೇರೆ ಯಾವುದೇ ಜಿಲ್ಲೆಗೆ ಕಾರ್ಯ ನಿಮಿತ ತೆರಳಿದರು ಉಡುಪಿ ವಿಧಾನ ಸಭಾ ಕ್ಷೇತ್ರವನ್ನು ಮರೆಯಲಾರೆ ಹಾಗೂ ತನ್ನ ಏಳಿಗೆ ದುಡಿದ ಕಾಂಗ್ರೆಸನ ಕಾರ್ಯಕರ್ತ ರಿಗೆ ಮತ್ತು ಉಡುಪಿ ವಿಧಾನ ಸಭೆ ಜನತೆಗೆ ಕೃತಜ್ಞತೆ ಅರ್ಪಿಸಿದರು.
ಉದ್ಯಾವರದ ಬಲಾಯಿಪಾದೆ ಸಮೀಪದಿಂದ ಉಡುಪಿ ಬ್ರಹ್ಮಗಿರಿಯ ಕಾಂಗ್ರೆಸ್ ಭವನದ ವರೆಗೆ ಕಾಂಗ್ರೆಸನ ಕಾರ್ಯಕರ್ತರು ಮತ್ತು ಅಭಿಮಾನಿ ಬಳಗದವರು ಮೆರವಣಿಗೆ ಮೂಲಕ ಅಭಿನಂದನೆ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಉಡುಪಿ ನಗರ ಸಭೆ ಅಧ್ಯಕ್ಷರು ಯುವರಾಜ.ಪಿ,ಅಮೃತ ಶೈಣೆ,ಗೀತಾ ಶೆಟಿ,ದಿವಾಕರ್, ಕೇಶವ ಹಾಗೂ ಉಡುಪಿ ಕಾಂಗ್ರೆಸನ ಬ್ಲಾಕ್ ಕಾರ್ಯಕರ್ತರು ಮತ್ತು ಅಭಿಮಾನಿ ಬಳಗದವರು ಅಭಿನಂದನೆ ಕಾರ್ಯಕ್ರಮದಲ್ಲಿ ಉಪಸ್ಥಿತಿತರಿದ್ದರು.