ಮಂಗಳೂರು/ಕಾಸರಗೋಡು.ಜುಲೈ.10 : ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ 3 ನೇ ತರಗತಿಯ ವಿದ್ಯಾರ್ಥಿಯನ್ನು ಬರ್ಬರವಾಗಿ ಇರಿದು ಕೊಲೆ ಮಾಡಿದ ಘಟನೆ ಕಾಸರಗೋಡಿನ ಪೆರಿಯ ಕಲ್ಯಾಟ್ಟ್ ನಲ್ಲಿ ಗುರುವಾರ ನಡೆದಿದೆ.
ಹತ್ಯೆಗೀಡಾದ ವಿದ್ಯಾರ್ಥಿಯನ್ನು ಸರಕಾರಿ ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದ ಫಹದ್ ಎಂದು ಗುರುತಿಸಲಾಗಿದ್ದು, ಈತ ಕಲ್ಯಾಟ್ಟ್ ಮಸೀದಿ ನಿವಾಸಿ ಅಬ್ಟಾಸ್ ಹಾಗೂ ಆಯೇಷಾ ದಂಪತಿಗಳ ಪುತ್ರ.
ಫಹಾದ್ ಗೆಳೆಯರೊಂದಿಗೆ ಶಾಲೆಗೆ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಓಡಿಸಿಕೊಂಡು ಬಂದ ಮಾನಸಿಕ ಅಸ್ವಸ್ಥ ವಿಜಯನ್ ಎಂಬಾತ ಚೂರಿಯಿಂದ ಹಿಗ್ಗಾಮುಗ್ಗ ಇರಿದಿದ್ದಾನೆ. ಇರಿತದಿಂದ ಗಂಭೀರವಾಗಿ ಗಾಯಗೊಂಡ ಫಹಾದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಆರೋಪಿ ವಿಜಯನ್ನನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.