ಅಂತರಾಷ್ಟ್ರೀಯ

ಮಮಲ್ಲಾಪುರಂ ಬೀಚ್’ನಲ್ಲಿ 30 ನಿಮಿಷ ಕಸ ಎತ್ತಿ ‘ಸ್ವಚ್ಚ ಭಾರತ’ಕ್ಕೆ ಕರೆಕೊಟ್ಟ ಪ್ರಧಾನಿ ಮೋದಿ (Video)

Pinterest LinkedIn Tumblr

ಚೆನ್ನೈ: ಪ್ರಧಾನಿ ನರೇಂದ್ರ ಮೋದಿಯವರು ಚೆನ್ನೈ ಬಳಿಯಲ್ಲಿನ ಮಮಲ್ಲಾಪುರಂ ಸಮುದ್ರ ಕಿನಾರೆ ಸ್ವಚ್ಚಗೊಳಿಸಿ ಸ್ವಚ್ಚ ಭಾರತ ಮಾಡೋಣ ಎಂದು ದೇಶದ ಜನತೆಗೆ ಕರೆಕೊಟ್ಟ ವಿಡಿಯೋ ವೈರಲ್ ಆಗಿದೆ.

ಶನಿವಾರದಂದು ಪ್ರತಿನಿತ್ಯದಂತೆ ಯೋಗಾಸನ, ಧ್ಯಾನ ಮುಗಿಸಿದ ನಂತರ ಮಮಲಾಪುರಂ ಬೀಚ್ ನಲ್ಲಿ ಸ್ವಚ್ಚತಾ ಕಾರ್ಯ ನಡೆಸಿದ ಮೋದಿಜಿ..ಖುದ್ದು ಸಮುದ್ರ ತೀರದಲ್ಲಿದ್ದ ಪ್ಲಾಸ್ಟಿಕ್ ಮೊದಲಾದ ಕಸಕಡ್ಡಿಗಳನ್ನು ಎತ್ತಿದರು. ಸುಮಾರು ಅರ್ಧಗಂಟೆಗಳ ಕಾಲ ಸ್ವಚ್ಚತೆ ಕಾರ್ಯ ನಡೆಸಿದರು.

ಈ ಬಗ್ಗೆ ಟ್ವೀಟರ್;ನಲ್ಲಿ ‘ನನ್ನ ‘ಸಂಗ್ರಹ’ (ಕಸ) ವನ್ನು ಹೋಟೆಲ್ ಸಿಬ್ಬಂದಿಯಾಗಿರುವ ಜಯರಾಜ್ ಅವರಿಗೆ ಹಸ್ತಾಂತರಿಸಿದೆ. ನಮ್ಮ ಸಾರ್ವಜನಿಕ ಸ್ಥಳಗಳು ಸ್ವಚ್ ಮತ್ತು ಅಚ್ಚುಕಟ್ಟಾಗಿದ್ದಾಗ ನಾವು ಸದೃಡರಾಗಿ ಮತ್ತು ಆರೋಗ್ಯವಾಗಿರುತ್ತೇವೆ ಎಂದು ಮೋದಿ ಬರೆದುಕೊಂಡಿದ್ದಾರೆ.

ಇನ್ನು ಅವರ ಫೇಸ್ ಬುಕ್ ಖಾತೆಯಲ್ಲಿ ಶೇರ್ ಮಾಡಿದ ಈ ವಿಡಿಯೋವನ್ನು ಮುಕ್ಕಾಲು ಗಂಟೆ (೪೫ ನಿಮಿಷ) ಅವಧಿಯಲ್ಲಿ ೧೦ ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

Comments are closed.