ಕರಾವಳಿ

ನೌಕಾಸೇನೆಯ ನೌಕೆಯೇ ‘ಸುವರ್ಣ ತ್ರಿಭುಜ’ಕ್ಕೆ ಡಿಕ್ಕಿ ಹೊಡೆದು ಮೀನುಗಾರರನ್ನು ಕೊಂದಿದೆ: ಪ್ರಮೋದ್ ಮಧ್ವರಾಜ್ (Video)

Pinterest LinkedIn Tumblr

ಉಡುಪಿ: ಸುವರ್ಣ ತ್ರಿಭುಜ ದೋಣಿ ನಾಪತ್ತೆ ಪ್ರಕರಣದಲ್ಲಿ ಮೀನುಗಾರರ ಸಾವಿಗೆ ಕಾರಣವಾದ ಮತ್ತು ದೊಣಿಯನ್ನು ದುರಂತಕ್ಕೀಡು ಮಾಡಿದ ನೌಕಾದಳದ ಬೃಹತ್ ಯುದ್ದನೌಕೆ INS ಕೋಚಿಯ ತಳಭಾಗದಲ್ಲಿ ಆಗಿರುವ ಹಾನಿಯ ಚಿತ್ರ ಸಿಕ್ಕಿದೆ. ದೇಶದ ಪ್ರಧಾನಮಂತ್ರಿಯವರು ತಕ್ಷಣ ಈ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಬೇಕಾಗಿ ಕರಾವಳಿಯ ಸಮಸ್ತ ಮೀನುಗಾರರು ಮತ್ತು ಅವರ ಕುಟುಂಬದ ಪರವಾಗಿ ಆಗ್ರಹ ಮಾಡುತ್ತಿದ್ದೇನೆಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ದೇಶದ ರಕ್ಷಣೆಗೆ ಮತ್ತು ಸಮುದ್ರದಲ್ಲಿ ಮೀನುಗಾರರ ರಕ್ಷಣೆಯ ಜವಾಬ್ದಾರಿ ಹೊತ್ತ ನೌಕೆಯ ಅಧಿಕಾರಿಗಳ ಬೇಜವ್ದಾರಿ ವರ್ತನೆಯಿಂದ ಈ ಘಟನೆ ಸಂಭವಿಸಿದ್ದು ಇದು ಮೀನುಗಾರರ ಕೊಲೆ ಎಂದು ಹೇಳಬೇಕಾಗುತ್ತದೆ. ಲೋಕಸಭಾ ಚುನಾವಣೆಗೂ ಮೊದಲೆ ಈ ಬಗ್ಗೆ ಮೀನುಗಾರರಿಗೆ ಮಾಹಿತಿ ಸಿಕ್ಕಿದ್ದರೂ ಅದನ್ನು ಕೇಂದ್ರ ರಕ್ಷಣಾ ಇಲಾಖೆ ಮತ್ತು ಬಿಜೆಪಿ ನಾಯಕರು ರಾಜಕೀಯ ಲಾಭಕ್ಕಾಗಿ ಮರೆಮಾಚಿ , ಗೌಪ್ಯವಾಗಿ ಇಡುವ ಪ್ರಯತ್ನ ಮಾಡಲಾಗಿತ್ತು ಎಂದು ಆರೋಪಿಸಿದ್ದಾರೆ.

 

ಹೆಣದ ಮೇಲೆ ರಾಜಕೀಯ ಮಾಡುವ ಬಿಜೆಪಿ ನಾಯಕರಿಗೆ ಮತ್ತು ಕೇಂದ್ರ ಸರಕಾರಕ್ಕೆ ತಾಕತ್ತಿದ್ದರೆ ಸುಪ್ರೀಂ ಕೊರ್ಟ್ ನ ನಿವೃತ್ತ ನ್ಯಾಯಾಧೀಶರ ನೇತೃತ್ವದ ನ್ಯಾಯಾಂಗ ತನಿಖೆಗೆ ಒಪ್ಪಿಸಿ ಈ ವಿಚಾರದ ಸತ್ಯಾಸತ್ಯಗಳನ್ನು ಬಹಿರಂಗಪಡಿಸಬೇಕಾಗಿ ಆಗ್ರಹಿಸುತ್ತಿದ್ದೇನೆಂದು ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

Comments are closed.