ಕರಾವಳಿ

ಎಫ್.ಐ.ಆರ್ ಜೊತೆಗೆ ಕಂಪೆನಿಯನ್ನು ಬ್ಲ್ಯಾಕ್ ಲಿಸ್ಟಿಗೆ ಸೇರಿಸುತ್ತೇವೆ: ನವಯುಗಕ್ಕೆ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ! (Video)

Pinterest LinkedIn Tumblr

ಕುಂದಾಪುರ: ಕಳೆದ ಹಲವು ದಿನಗಳಿಂದ ಸರ್ವಿಸ್ ರಸ್ತೆಯನ್ನು ಅಗೆದು ಖಾಲಿ ಜೆಲ್ಲಿ ಹಾಕಿ ಹಾಗೇ ಬಿಟ್ಟು ನಾಪತ್ತೆಯಾಗಿದ್ದ ನವಯುಗ ಕಂಪನಿ ವಿರುದ್ದ ಉಡುಪಿ ಜಿಲ್ಲಾಧಿಕಾರಿ ಪ್ರೀಯಾಂಕ ಮೇರಿ ಗರಂ ಆದ ಘಟನೆ ಶನಿವಾರ ಬೀಜಾಡಿಯಲ್ಲಿ ನಡೆಯಿತು.

ಸ್ಥಳೀಯರ ದೂರಿನ ಮೇರೆಗೆ ನವಯುಗ ಕಂಪನಿ ತಂಡವನ್ನು ಕರೆದುಕೊಂಡು ಬಂದ ಜಿಲ್ಲಾಧಿಕಾರಿ ಬೀಜಾಡಿ ಸರ್ವೀಸ್ ರೋಡ್ ಯು ಟರ್ನ್ ನಿಂದ ಬೀಜಾಡಿ ವೈ ಜಂಕ್ಷನ್ ತಿರುವು ತನಕ ಕಾಲ್ನಡೆಗೆಲ್ಲಿ ತೆರಳಿ ಸ್ವತಃ ಪರಿಶೀಲನೆ ನಡೆಸಿ ಕಂಪನಿ ಇಂಜಿನಯರ್ ಗಳನ್ನು ತೀವ್ರ ತರಾಟೆಗೆ ತೆಗೆದು ಕೊಂಡರು. ದಿನವಿಡಿ ಈ ರಸ್ತೆಯಲ್ಲಿ ವಿದ್ಯಾರ್ಥಿಗಳು ಹಾಗೂ ವಯೋವೃದ್ಧ ಸೇರಿದಂತೆ ಸ್ಥಳೀಯರೂ ತಿರುಗಾಡುವುದಾದರೂ ಹೇಗೆ?, ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಯಾವುದೇ ಸೇಪ್ ಗಾರ್ಡ್ ಗಳಿಲ್ಲ, ಇಷ್ಟೊಂಡು ಅಪಾಯಕಾರಿ ಇರುವಾಗ ನಿಮಗಿನ್ನೂ ಕಾಲವಾಕಾಶ ಕೊಡುವ ಪ್ರಶ್ನೆಯೇ ಇಲ್ಲ. ಸೋಮವಾರದಂದು ಕಾಮಗಾರಿ ಕೈಗೆತ್ತಿಕೊಳ್ಲಿಲ್ಲವಾದರೆ ಕಂಪನಿಯನ್ನು ಬ್ಲಾಕ್ ಲಿಸ್ಟ್ ಹಾಕಿ ಕಾನೂನೂತ್ಮಾಕ ಕೇಸುಗಳನ್ನು ದಾಖಲಿಸುವುದರ ಮೂಲಕ ತುರ್ತು ಕ್ರಮ ಕೈಗೊಳ್ಳುತ್ತೇನೆ ಎಂದು ಖಡಕ್ ಅದೇಶ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ತಹಶೀಲ್ದಾರ್ ತಿಪ್ಪೇಸ್ವಾಮಿ ಹಾಗೂ ನವಯುಗ ಕಂಪನಿ ಅಧಿಕಾರಿಗಳ ತಂಡ ಉಪಸ್ಥಿತರಿದ್ದರು.

ಸ್ಥಳೀಯ ಪತ್ರಕರ್ತರ ದೂರು: 2015 ರಿಂದ 2019 ರ ತನಕ 80 ಕ್ಕೂ ಹೆಚ್ಚೂ ಅಪಘಾತಗಳಗಿರಬಹುದು. ಇದರಲ್ಲಿ 5 ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. 25 ಕ್ಕೂ ಹೆಚ್ಚು ಗಾಯಾಳುಗಾಳಾಗಿದ್ದಾರೆ. ಸ್ಥಳೀಯ ವಾಸಿಗಳು ಹಾಗೂ ಅಂಗಡಿ ಮುಗ್ಗಿಟ್ಟಿನವರೂ ಇಲ್ಲಿನ ದೂಳಿನಿಂದ ಅನಾರೋಗ್ಯ ಪೀಡಿತರಾಗಿದ್ದಾರೆ. ಕುಂದಾಪುರ ಭಾಗದಲ್ಲಿ ಸಮರ್ಪಕವಾಗಿ ಯಾವುದೇ ಹೆದ್ದಾರಿ ಕಾಮಗಾಗಿ ಅಗಿಲ್ಲ. ರಾತ್ರಿ ವೇಳೆ ಹೆದ್ದಾರಿ ದೀಪಗಳು ಊರಿಯುವುದಿಲ್ಲ, ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಯಾವುದೇ ಸೇಪ್ ಗಾರ್ಡ್ ಗಳಿಲ್ಲ, ಇಷ್ಟೆಲ್ಲಾ ಹೀಗಿರುವಾಗ ಕುಂದಾಪುರ ಭಾಗಕ್ಕೆ ಟೋಲ್ ಕಟ್ಟುವ ಪ್ರಮೇಯ ಮಾತ್ರ ತಪ್ಪಿಲ್ಲ ಎಂದು ಸ್ಥಳೀಯ ಪತ್ರಕರ್ತ ಐಶ್ವರ್ಯ ಬೀಜಾಡಿ ಜಿಲ್ಲಾದಿಕಾರಿಯವರಿಗೆ ಮನದಟ್ಟು ಮಾಡಿದರು.

ಸ್ಥಳೀಯರ ತರಾಟೆ: ಡಿಸಿ ಸ್ಥಳಕ್ಕೆ ಬೇಟಿ ಕೊಟ್ಟಾಗ ಸ್ಥಳೀಯರು ನವಯುಗ ಕಂಪನಿ ಇಂಜಿಯರ್‌ಗಳಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿ ಸ್ಯಾಮ್ ಸನ್ ತರಾಟೆಗೆ ತೆಗೆದುಕೊಂಡರು. ಇಷ್ಟು ವರ್ಷ ಕಾಮಗಾರಿ ವಿಳಂಭವಾಗಿದಲ್ಲದೇ ಸರ್ವಿಸ್ ರೋಡ್‌ನ್ನು ಅಗೆದು ಹಾಕಿ ಸಾರ್ವಜನಿಕರು ತಿರುಗಾಡದ ಪರಿಸ್ಥಿತಿ ನಿರ್ಮಾಣ ಮಾಡಿದ್ದೀರಿ. ಈ ಸರ್ವೀಸ್ ರಸ್ತೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತಿರುಗಾಡುವಾಗ ಮೇಲ್ಬಾಗದ ಹೆದ್ದಾರಿಯಲ್ಲಿ ಓಡಾಡೋವ ವಾಹನಗಳನ್ನು ಕಂಡು ಹೆದರ ಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಏಲ್ಲಿಯಾದರೂ ಮೇಲ್ಗಡೆ ಓಡಾಡೋವ ವಾಹನ ಪಲ್ಟಿಯಾದರೇ ಇದಕ್ಕೆ ಹೊಣೆಯಾರು ಎಂದು ಅಕ್ರೋಶ ವ್ಯಕ್ತ ಪಡಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಲತಾ ಸುರೇಶ ಶೆಟ್ಟಿ, ತಾಲೂಕು ಪಂಚಾಯಿತಿ ಸದಸ್ಯೆ ವೈಲೆಟ್ ಬೆರೆಟ್ಟೂ, ಬೀಜಾಡಿ ಗ್ರಾಮ ಪಂಚಾಯತಿ ಸದಸ್ಯ ವಾದಿರಾಜ ಹೆಬ್ಬಾರ್, ಪಿಡಿ‌ಒ ಗಣೇಶ,ಗೋಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಸರಸ್ಪತಿ ಪುತ್ರನ್, ಬೀಜಾಡಿ ಸರ್ವಿಸ್ ರೋಡ್ ಹೋರಾಟ ಸಮಿತಿ ಮುಖಂಡ ರಾಜು ಬೆಟ್ಟಿನ ಮನೆ, ಚಂದ್ರಶೇಖರ ಬೀಜಾಡಿ, ಅಣ್ಣಪ್ಪ ಬೆಟ್ಟಿನಮನೆ, ನಾರಾಯಣ ಭಂಡಾರಿ, ಅನಂತಕೃಷ್ಣ ಉಪಾಧ್ಯಾಯ, ಬೀಜಾಡಿ ಮಿತ್ರ ಸಂಗಮ ಸಂಸ್ಥೆಯ ಅಧ್ಯಕ್ಷ ಬಿ.ಜಿ.ನಾಗರಾಜ ಬೀಜಾಡಿ, ಪದಾಧಿಕಾರಿಗಳಾದ ಅನೂಪ್ ಕುಮಾರ್ ಬಿ.ಆರ್, ನಾಗರಾಜ ಕಲಾವಿದ, ರಾಜೇಶ್ ಆಚಾರ್ ಗೋಪಾಡಿ, ಗಿರೀಶ್ ಬೀಜಾಡಿ, ರಾಜೇಶ್ ಆಚಾರ್ ಬೀಜಾಡಿ, ವಕ್ವಾಡಿ ಯುವಶಕ್ತಿ ಮಿತ್ರ ಮಂಡಲ ವಕ್ವಾಡಿ ಪ್ರಮುಖ ಸಂತೋಷ ಕುಲಾಲ್ ವಕ್ವಾಡಿ, ಬೀಜಾಡಿ ಬಡಾಗಡಿ ನಾಗಬೊಬ್ಬರ್ಯ ದೈವಸ್ಥಾನ ಚಾತ್ರಬೆಟ್ಟು ಇದರ ಅಧ್ಯಕ್ಷ ಶ್ರೀಧರ್ ಚಾತ್ರಬೆಟ್ಟು, ಮೂಡುಗೋಪಾಡಿ ರಿಫಾಯಿ ಜುಮ್ಮ ಮಸೀದಿಯ ಪ್ರಧಾನ ಕಾರ್ಯದರ್ಶಿ ಬಿ.ಎಮ್,ನಾಸೀರ್, ಬೀಜಾಡಿ ರಿಕ್ಷಾ ಚಾಳಕರ ಸಂಘದ ಪ್ರಮುಖ ದಿನೇಶ್ ಹಲ್ತೂರು, ಉದ್ಯಮಿ ಗಳಾದ ಸುರೇಶ್ ಬೆಟ್ಟಿನ್, ಜಯಕರ ಶೆಟ್ಟಿ, ಮಹೇಶ್ ಮಟ್ಟಿ , ಕರುಣಾಕರ ಶೆಟ್ಟಿ ಕೆದೂರು, ಮಹೇಶ್ ಭಂಡಾರಿ, ಸುಭಾಷ್ ಚಂದ್ ಮೊದಲಾದವರೂ ಇದ್ದರು.

ಇದನ್ನೂ ಓದಿರಿ: 

ಅರೆಬರೆಗೊಂಡ ಬೀಜಾಡಿ ಸರ್ವಿಸ್ ರಸ್ತೆ: ಡಿಸಿ ಬರ್ತಾರೆಂದು ಕಾದು ಸುಸ್ತಾದ ಜನತೆ! (Video)

Comments are closed.