ಕರಾವಳಿ

ಶಬರಿಮಲೆಯಲ್ಲಿ ಮಕರ ಜ್ಯೋತಿ, ಉಡುಪಿ ಜಿಲ್ಲಾದ್ಯಂತ ಧರ್ಮರಕ್ಷಾ ಜ್ಯೋತಿ (Video)

Pinterest LinkedIn Tumblr

ಉಡುಪಿ: ಶಬರಿಮಲೆಯಲ್ಲಿ ಮಕರ ಸಂಕ್ರಮಣದಂದು ಮಕರ ಜ್ಯೋತಿ ಬೆಳಗಿದರೆ ಪಂದಳ ರಾಜರ ಆದೇಶದಂತೆ ಧರ್ಮ ಫೌಂಡೇಶನ್‌ ಮುಂದಾಳತ್ವದಲ್ಲಿ ಜಿಲ್ಲೆಯ ವಿವಿಧೆಡೆ ಧರ್ಮರಕ್ಷಾ ಜ್ಯೋತಿ ಬೆಳಗಿಸಲಾಯಿತು.

ಕಡಿಯಾಳಿ, ಮಲ್ಪೆ ಮೊದಲಾದೆಡೆ ಸೇರಿದಂತೆ ಉಡುಪಿ ನಗರದ 28 ಕಡೆಗಳಲ್ಲಿ, ಕುಂದಾಪುರ, ಬೈಂದೂರು, ಕಾರ್ಕಳ, ಹೆಬ್ರಿ, ಕಾಪು, ಕೊಲ್ಲೂರು, ಗಂಗೊಳ್ಳಿ, ಬ್ರಹ್ಮಾವರ ಸೇರಿದಂತೆ ಸುಮಾರು 250 ಕಡೆ ಮುಸ್ಸಂಜೆ ಜ್ಯೋತಿಯನ್ನು ಅಯ್ಯಪ್ಪ ಸ್ವಾಮಿ ಭಕ್ತರು ಬೆಳಗಿದರು. ಅಯ್ಯಪ್ಪಸ್ವಾಮಿ ಭಜನೆಗಳನ್ನು ಹಾಡಿದರು. ಕೊನೆಯಲ್ಲಿ ಶಬರಿಮಲೆ ಪ್ರಸಾದವನ್ನು ವಿತರಿಸ ಲಾಯಿತು.

10ರಿಂದ 50 ವರ್ಷದೊಳಗಿನ ಮಹಿಳೆಯರು ಶಬರಿಮಲೆಗೆ ಭೇಟಿ ಕೊಡಲು ಅವಕಾಶ ಕೊಡಬೇಕೆಂಬ ನಿರ್ಣಯದ ವಿರುದ್ಧ ಹಮ್ಮಿಕೊಂಡ ಈ ಧರ್ಮರಕ್ಷಾ ಜ್ವಾಲಾ ಕಾರ್ಯಕ್ರಮದಲ್ಲಿ ಈ ವಯೋಮಾನದ ಮಹಿಳೆಯರು ಹೆಚ್ಚಾಗಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು.

Comments are closed.