ಕರಾವಳಿ

ಕೆರಾಡಿಯಲ್ಲಿ ಹಿಂದೂ ಸಂಘಟನೆ ಯುವಕರ ಕಾರ್ಯಾಚರಣೆ: ಗೋವುಗಳ ರಕ್ಷಣೆ (Video)

Pinterest LinkedIn Tumblr

ಕುಂದಾಪುರ: ಐದಾರು ಜಾನುವಾರುಗಳನ್ನು ಬೊಲೆರೋ ವಾಹನದಲ್ಲಿ ಹಿಂಸಾತ್ಮಕವಾಗಿ ಕಟ್ಟಿ ಸಾಗಾಟ ಮಾಡುತ್ತಿದ್ದ ಬಗ್ಗೆ ಸ್ಥಳಿಯ ಹಿಂದೂ ಪರ ಸಂಘಟನೆ ಕಾರ್ಯಕರ್ತರಿಗೆ ಸಿಕ್ಕ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ಬೊಲೆರೋ ವಾಹನ ಸಮೇತ ಜಾನುವಾರುಗಳನ್ನು ರಕ್ಷಿಸಿ ಪೊಲೀಸರ್ಗೆ ಒಪ್ಪಿಸಿದ್ದಾರೆ. ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೆರಾಡಿಯಲ್ಲಿ ಈ ಘಟನೆ ನಡೆದಿದೆ.

ಅಕ್ರಮವಾಗಿ ಜಾನುವಾರುಗಳನ್ನು ಹೊತ್ತೊಯ್ಯುತ್ತಿದ್ದ ಬೊಲೆರೋ ವಾಹನದ ಬಗ್ಗೆ ಸಂಶಯಗೊಂಡ ಆ ಭಾಗದ ಒಂದಷ್ಟು ಯುವಕರ ಗುಂಪು ವಾಹನವನ್ನು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿದ್ದು ಶರವೇಗದಲ್ಲಿ ಚಲಿಸುತ್ತಿದ್ದ ಬೊಲೆರೋ ವಾಹನದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ನಿಂತಿದೆ. ಕೂಡಲೇ ವಾಹನದಲ್ಲಿದ್ದವರು ಪರಾರಿಯಾಗಿದ್ದು ಬೆನ್ನತ್ತಿ ಬಂದ ಯುವಕರು ವಾಹನ ಪರಿಶೀಲಿಸುವಾಗ ಹಿಂಸಾತ್ಮಕವಾಗಿ ಕಟ್ಟಿ ಹಾಕಿದ್ದ ಜಾನುವಾರುಗಳು ಪತ್ತೆಯಾಗಿದೆ. ಅದೇ ಸಂದರ್ಭ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಾಹನ ಮತ್ತು ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಕೊಲ್ಲೂರು ಪೊಲೀಸರು ಮಾಹಿತಿ ಕಲೆಹಾಕಿ ತನಿಕೆ ನಡೆಸುತ್ತಿದ್ದಾರೆ.

Comments are closed.