ಕರಾವಳಿ

ಸವಾಲಿಗಾಗಿ ಸ್ನೇಹಿತರ ಎದುರೇ ನದಿಗೆ ಹಾರಿದ ಯುವಕ ಸಾವು (ವಿಡಿಯೋ)

Pinterest LinkedIn Tumblr

ಉಡುಪಿ: ಮೋಜಿನ ನಡುವೆ ಸ್ನೇಹಿತರೊಂದಿಗೆ ನದಿಗೆ ಹಾರುವ ಸವಾಲು ಹಾಕಿದ ಯುವಕನೋರ್ವ ರೈಲ್ವೆ ಸೇತುವೆಯಿಂದ ಸ್ವರ್ಣ ನದಿಗೆ ಹಾರಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ನಡೆದಿದ್ದು, ಆತನ ಮೃತದೇಹ ಮಂಗಳವಾರ ಸಂಜೆ ಪತ್ತೆಯಾಗಿದೆ.

ಮೃತ ಯುವಕನನ್ನು ಹುಬ್ಬಳ್ಳಿ ಮೂಲದ ಕಾಪು ನಿವಾಸಿ ಸಾದಿಕ್ ಎಂದು ಗುರುತಿಸಲಾಗಿದೆ.

ಸೋಮವಾರ ಸಾದಿಕ್ ಸೇರಿದಂತೆ 6 ಮಂದಿ ಗೆಳೆಯರು ಪೆರಂಪಳ್ಳಿ ಸ್ವರ್ಣ ನದಿಯ ರೈಲ್ವೆ ಸೇತುವೆ ಬಳಿ ವಿಹಾರಕ್ಕೆ ಬಂದಿದ್ದು, ಅಲ್ಲಿ ಮೋಜು ಮಸ್ತಿ ಮಾಡಿದ ಬಳಿಕ ನದಿಗೆ ಹಾರಿ ಈಜುವ ಸವಾಲು ಹಾಕಿಕೊಂಡಿದ್ದಾರೆ.ಅದರಂತೆ ಮೊದಲು ಸಾದಿಕ್ ನದಿಗೆ ಹಾರಿದ್ದು ಸರಿಯಾಗಿ ಈಜಲು ಬಾರದೆ ನೀರಿಗೆ ಕೊಚ್ಚಿಕೊಂಡು ಹೋಗಿದ್ದಾರೆ. ಸಾದಿಕ್ ಮುಳುಗುತ್ತಿದ್ದಂತೆಯೇ ಆತನ ರಕ್ಷಣೆಗೆ ಗೆಳೆಯ ಸಿಯಾನ್ ಎಂಬಾತ ನದಿಗೆ ಹಾರಿದ್ದು ಆತನು ಕೂಡ ನೀರಿನಲ್ಲಿ ಮುಳುಗುತ್ತಿದ್ದ ವೇಳೆ ಸ್ಥಳಿಯರು ನೋಡಿ ರಕ್ಷಿಸಿದ್ದಾರೆ. ಮಂಗಳವಾರ ಸಂಜೆಯ ವೇಳೆಗೆ ಸಾದಿಕ್ ಮೃತದೇಹ ಸಿಕ್ಕಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಗೆಳೆಯರ ಮುಂದೆಯೇ ನದಿಗೆ ಹಾರಿದ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಗಳಲ್ಲಿ ವೈರಲ್ ಆಗಿದೆ.

ಮಣಿಪಾಲ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.

Comments are closed.