ಕರಾವಳಿ

ಬಿ.ಆರ್ ಸೇವಾ ಟ್ರಸ್ಟ್ ಅಲ್ತಾರು ವತಿಯಿಂದ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ, ಸಾಧಕರಿಗೆ ಸನ್ಮಾನ

Pinterest LinkedIn Tumblr

ಉಡುಪಿ: ಬಿ.ಆರ್. ಸೇವಾಟ್ರಸ್ಟ್ ಅಲ್ತಾರು ಇವರ ಆಶ್ರಯದಲ್ಲಿ ಸ್ಯಾಬ್ರಕಟ್ಟೆ ಸ್ವಾಗತ್ ಹಾಲ್ ನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜ.7 ರವಿವಾರ ನಡೆಯಿತು.

ಡಾ. ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಮೊಂಬತ್ತಿ ಬೆಳಗಿ ದ.ಸಂಸ. ಭೀಮಘರ್ಜನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಉದಯ ಕುಮಾರ್ ತಲ್ಲೂರು ಕಾರ್ಯಕ್ರಮ ಉದ್ಘಾಟಿಸಿ ‌ಮಾಯನಾಡಿ, ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಈ ಕಾರ್ಯಕ್ರಮ ಶ್ಲಾಘನೀಯ. ಟ್ರಸ್ಟ್ ಕಾರ್ಯ ಅಭಿನಂದನಾರ್ಹ ಎಂದರು.

ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ಬಳಿಕ ಸನ್ಮಾನ ಸ್ವೀಕರಿಸಿ ಮಾತನಾಡಿ, ಅಂಬೇಡ್ಕರ್ ನೀಡಿರುವ ಸ್ವಾತಂತ್ರ್ಯ, ಸಹೋದರತೆ, ಸಮಾನತೆಯನ್ನು ಬೋಧಿಸುವ ಸಂವಿಧಾನವೇ ಶ್ರೇಷ್ಠ ಧರ್ಮ ಎಂದು ಪ್ರತಿಪಾದಿಸಿದರು. ಈ ಟ್ರಸ್ಟ್ ನಿಂದ ಇನ್ನಷ್ಟು ಸಮಾಜಮುಖಿ ಕೆಲಸ ನಡೆಯಲಿ ಎಂದು ಹಾರೈಸಿದರು.

ನ್ಯಾಯಾಂಗದಲ್ಲಿ ಉತ್ತಮ ಸೇವೆ ಸಲ್ಲಿಸಿದ ರವಿಕಿರಣ್ ಮುರ್ಡೇಶ್ವರ, ಪಿ.ಎಚ್.ಡಿ. ಪದವೀಧರರಾದ ಡಾ.ನಾಗರತ್ನ ಕುಮಾರಸ್ವಾಮಿ, ಡಾ.ಕಲಾವತಿ ಕಡಂಗೋಡು ಇವರನ್ನ ಸನ್ಮಾನಿಸಲಾಯಿತು. ಸುಮಾರು 15 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನದ ಚೆಕ್ ವಿತರಿಸಲಾಯಿತು.

ಬಿ.ಆರ್.ಸೇವಾ ಟ್ರಸ್ಟ್ ಅಲ್ತಾರು ಅಧ್ಯಕ್ಷ ಚಂದ್ರ ಅಲ್ತಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಯಡ್ತಾಡಿ ಗ್ರಾ. ಪಂ. ಅಧ್ಯಕ್ಷ ಎಚ್. ಪ್ರಕಾಶ್ ಶೆಟ್ಟಿ ಹೇರಾಡಿ, ಬ್ರಹ್ಮಾವರ ತಾಲೂಕು ಉಪ ತಹಶೀಲ್ದಾರ್ ರಾಘವೇಂದ್ರ ಎಚ್. ನಾಯಕ್, ಶ್ರೀ ಕ್ಷೇತ್ರ ಕಾಜ್ರಳ್ಳಿ ಆಡಳಿತ ಮೊಕ್ತೇಸರ ನಿರಂಜನ ಹೆಗ್ಡೆ ಅಲ್ತಾರು, ಲಯನ್ಸ್ ಜಿಲ್ಲೆ 317ಸಿ ಮಾಜಿ ಗವರ್ನರ್ ವಿಶ್ವನಾಥ ಶೆಟ್ಟಿ, ಲೇಖಕ ಶ್ರೀರಾಮ ದಿವಾಣ, ಕೃಷ್ಣ ಅಲ್ತಾರ್, ಶೇಖರ್ ಆರ್ಡಿ, ರಾಮ ಅಲ್ತಾರ್, ಜಗನ್ನಾಥ ಕೊಟಂಬೈಲ್, ಸುರೇಂದ್ರ ಅಲ್ತಾರ್, ಗೋಪಾಲ ಕೋಟಂಬೈಲ್, ನಾಗರಾಜ್ ಚೇರ್ಕಾಡಿ ಮೊದಲಾದವರಿದ್ದರು.

ಪೂರ್ವಿಕ ಅಲ್ತಾರು ಸ್ವಾಗತಿಸಿದರು. ಸತೀಶ್ ಸೂರ್ಗೋಳಿ ಪ್ರಾಸ್ತಾವಿಕ ಮಾತನಾಡಿದರು, ರಾಘು ಶೀರೂರು ನಿರೂಪಿಸಿದರು.

Comments are closed.