ಕರಾವಳಿ

ಪಂಚಗಂಗಾವಳಿ ನದಿ ತೀರದಲ್ಲಿ ಜಾನುವಾರು ತಲೆ, ಅವಶೇಷಗಳು ಪತ್ತೆ ಬಗ್ಗೆ ದೂರು ದಾಖಲು; ಕುಕೃತ್ಯಕ್ಕೆ ಹಿಂಜಾವೇ ಖಂಡನೆ

Pinterest LinkedIn Tumblr

ಕುಂದಾಪುರ: ಗಂಗೊಳ್ಳಿ ಬಸ್ ನಿಲ್ದಾಣದ ಸಮೀಪದ ಪಂಚಗಂಗಾವಳಿ ನದಿಯ ದಡದಲ್ಲಿ ಜಾನುವಾರು ತಲೆ ಮತ್ತು ಪ್ಲಾಸ್ಟಿಕ್ ಚೀಲದಲ್ಲಿ ಗೋವಿನ ಅವಶೇಷಗಳು ಪತ್ತೆಯಾದ ಘಟನೆ ಭಾನುವಾರ ಸಂಜೆ ವೇಳೆ ವರದಿಯಾಗಿದ್ದು ಸ್ಥಳಕ್ಕೆ ಸರ್ಕಲ್ ಬೈಂದೂರು ಇನ್ಸ್‌ಪೆಕ್ಟರ್ ಹಾಗೂ ಗಂಗೊಳ್ಳಿ ಪಿಎಸ್ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

ದೂರು ದಾಖಲು:
ಭಾನುವಾರ ಸಂಜೆ ವೇಳೆ ಬಸ್ ನಿಲ್ದಾಣದ ಹೊಳೆ ತೀರದಲ್ಲಿ ಜಾನುವಾರು ತಲೆ ಭಾಗ, ಅವಶೇಷಗಳು ಕಂಡುಬಂದಿದೆ. ಗಂಗೊಳ್ಳಿ ಭಾಗದಲ್ಲಿ ಹಿಂದಿನಿಂದಲೂ ನಿರಂತರವಾಗಿ ಗೋ ಸಾಗಾಟ, ಗೋ ಹತ್ಯೆ ನಡೆಯುತ್ತಿದ್ದು ಇದರಿಂದಾಗಿ ಧಾರ್ಮಿಕ ಭಾವನೆ ಕೆರಳಿಸಲಾಗುತ್ತಿದೆ. ಶಾಂತಿ ಸುವ್ಯವಸ್ಥೆ ಹಾಳು ಮಾಡುವ ದುರುದ್ದೇಶದಿಂದ ಇಂತಹ ಕುಕೃತ್ಯ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಹಿಂಜಾವೇ ಆಗ್ರಹಿಸಿದೆ.
ಸ್ಥಳೀಯ ನಿವಾಸಿ ಅನುಪ್ ಗಂಗೊಳ್ಳಿ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಹಿಂಜಾವೇ ಖಂಡನೆ..
ಶಾಂತಿಯುತವಾಗಿರುವ ಗಂಗೊಳ್ಳಿಯಲ್ಲಿ ಕೋಮು ಸಾಮರಸ್ಯ ಕದಡಿ ಅಶಾಂತಿ ಸೃಷ್ಟಿಸುವ ಹುನ್ನಾರ ನಡೆಸುವವರನ್ನು ತಕ್ಷಣ ಬಂಧಿಸಬೇಕು ಹಾಗೂ ಹಿಂದೂ ಧಾರ್ಮಿಕ ಹಬ್ಬಗಳ ಸಂದರ್ಭದಲ್ಲಿ ಹಿಂದೂ ಧಾರ್ಮಿಕ ಭಾವನೆಗಳನ್ನು ಕೆರಳಿಸುವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಗಂಗೊಳ್ಳಿಯಲ್ಲಿ ನಡೆದ ಈ ಕೃತ್ಯವನ್ನು ಹಿಂಜಾವೇ ಖಂಡಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.