ಕರಾವಳಿ

ಬ್ರಹ್ಮಾವರದಲ್ಲಿ ಸರಣಿ ಅಪಘಾತ; ಓರ್ವ‌ ದಾರುಣ ಸಾವು, ನಾಲ್ವರಿಗೆ ಗಾಯ

Pinterest LinkedIn Tumblr

ಉಡುಪಿ: ಬ್ರಹ್ಮಾವರ ತಾಲೂಕು ಸಾಬ್ರಕಟ್ಟೆಯಲ್ಲಿ ಸಮೀಪ ಗೂಡ್ಸ್‌ ಅಫೇ, ಕಾರು, ಬೈಕ್ ನಡುವೆ ಸರಣಿ ರಸ್ತೆ ಅಪಘಾತ ಸಂಭವಿಸಿದೆ. ಈ ಅವಘಡದಲ್ಲಿ ಓರ್ವ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ.ಮೃತರನ್ನು ಮಧುವನ ನಿವಾಸಿ ಸುರೇಶ ಮರಕಾಲ ಎಂದು ಗುರುತಿಸಲಾಗಿದೆ.

ಮೀನು ತುಂಬಿಕೊಂಡು ಸಾಬ್ರಕಟ್ಟೆ ಕಡೆ ಬರುತ್ತಿದ್ದ ಅಫೆ ಗೂಡ್ಸ್ ವಾಹನ ಜೆಸಿಬಿಯನ್ನು ಓವರ್ ಟೆಕ್ ಮಾಡುವ ಭರದಲ್ಲಿ ಬಾರಕೂರು ಕಡೆ ಬರುತ್ತಿದ್ದ ಸ್ವಿಪ್ಟ್ ಕಾರಿಗೆ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಮೀನು ತುಂಬಿದ ವಾಹನದ ಎಡಭಾಗದಲ್ಲಿ ಕುಳಿತಿದ್ದ ಸುರೇಶ ಮರಕಾಲ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಇನ್ನು ಅಫೆ ಗೂಡ್ಸ್ ವಾಹನದ ಚಾಲಕನೂ ಗಾಯಗೊಂಡಿದ್ದಾರೆ. ಇದೇ ವೇಳೆ ನಡುವೆ ಬೈಕ್ ಒಂದು ಸಿಲುಕಿಕೊಂಡಿದ್ದು, ಬೈಕ್ ಸವಾರನಿಗೆ ಕಾಲಿಗೆ ತೀವ್ರವಾದ ಪೆಟ್ಟಾಗಿದೆ. ಕಾರಿನಲ್ಲಿದ್ದ ಇಬ್ಬರೂ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.