ಶಿವಮೊಗ್ಗ: ನಕಲಿ 500 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಭದ್ರಾವತಿಯ ಹಳೆ ನಗರ ಪೊಲೀಸರು ಬಂಧಿಸಿದ್ದಾರೆ.
ಭದ್ರಾವತಿಯ ರಂಗಪ್ಪ ಸರ್ಕಲ್ ಬಳಿ ತರೀಕೆರೆಯ ನಿವಾಸಿ ಅರುಣ್ ಕುಮಾರ್(23) ಹಾಗೂ ಶಿವಮೊಗ್ಗದ ಹರಿಗೆಯ ನಿವಾಸಿ ಪ್ರೇಮ್ ರಾಜ್(23) ಬಂಧಿತರು.
ಇಬ್ಬರು ಆರೋಪಿಗಳು ನೋಟು ಚಲಾವಣೆ ನಡೆಸಲು ಮುಂದಾಗಿದ್ದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಿಂದ 500 ರೂ. ಮುಖ ಬೆಲೆಯ 182 ನೋಟುಗಳು ಸೇರಿದಂತೆ ನೋಟಿನ ಪ್ರಿಂಟರ್ ಮಿಷನ್ ವಶಕ್ಕೆ ಪಡೆದಿದ್ದಾರೆ.
ಬಂಧಿತರ ವಿರುದ್ದ ಕಲಂ 489 (ಎ)(ಬಿ)(ಸಿ)(ಡಿ) ಸಹಿತ ಐಪಿಸಿ ಸೆಕ್ಷನ್ 34ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Comments are closed.