ಕರಾವಳಿ

ಕೋಟೇಶ್ವರ‌ ಸಮೀಪದ ಹಳೆಅಳಿವೆ ರಸ್ತೆಯಲ್ಲಿ ಟಿಪ್ಪರ್ ಡಿಕ್ಕಿಯಾಗಿ ಬೈಕ್ ಸವಾರ ಸಾವು

Pinterest LinkedIn Tumblr

ಕುಂದಾಪುರ: ತಾಲೂಕಿನ ಕೋಟೇಶ್ವರ ಬಳಿಯ ಹಳೆಅಳಿವೆಯಿಂದ ಕೋಟೇಶ್ವರದ ಕಡೆಗೆ ಹೋಗುತ್ತಿದ್ದ ಬೈಕಿಗೆ ಪೇಟೆ ಹಳೆಅಳಿವೆಯಿಂದ ಕಡೆ ಹೋಗುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಿನಾರ ಬೀಚ್ ರೋಡ್ ಪೋಸ್ಟ್ ಆಫೀಸ್ ಬಳಿ ಸಂಭವಿಸಿದೆ.

ಬೀಜಾಡಿ ಗ್ರಾಮದ ನಿವಾಸಿ ಬೈಕ್ ಸವಾರ ವಿಜೇಂದ್ರ ಪೂಜಾರಿ (36)ಮೃತಪಟ್ಟ ದುರ್ದೈವಿ.

ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದ ವಿಜೇಂದ್ರ ಅವರು ಮಧ್ಯಾಹ್ನ ಊಟ ಮುಗಿಸಿ ಸಂಜೆ ಕಚೇರಿಗೆ ತೆರಳುವಾಗ ಈ ಘಟನೆ ಸಂಭವಿಸಿದ್ದು ಟಿಪ್ಪರ್ ಚಾಲಕನ ಅಜಾಗರೂಕತೆ‌ ಕಾರಣ ಎಂಬುದಾಗಿ ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜೇಂದ್ರ ಹಿರಿಯ ಮಗನಾಗಿ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದರು. ಮದುವೆಯಾಗಿ ಒಂದೂವರೆ ವರ್ಷವಾಗಿದ್ದು ಪತ್ನಿ 7 ತಿಂಗಳ ಗರ್ಭಿಣಿಯಾಗಿದ್ದಾರೆ. ಮೃತರು ತಾಯಿ ತಂದೆ ಪತ್ನಿ ಇಬ್ಬರು ಸೋದರರು ಇಬ್ಬರು ಸೋದರಿಯರನ್ನು ಅಗಲಿದ್ದಾರೆ.

Comments are closed.