ಕರ್ನಾಟಕ

ನ್ಯಾಯಾಲಯದ ಆವರಣದಲ್ಲೇ ಹೃದಯಾಘಾತದಿಂದ ಮೃತಪಟ್ಟ ಚಾಮರಾಜನಗರ ನಗರಸಭಾ ಸದಸ್ಯ

Pinterest LinkedIn Tumblr

ಚಾಮರಾಜನಗರ: ನಗರಸಭಾ ಸದಸ್ಯರೊಬ್ಬರು ನ್ಯಾಯಾಲಯದ ಆವರಣದಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಇಂದು ನಡೆದಿದೆ.

ಚಾಮರಾಜನಗರದ ಗಾಳಿಪುರ ಬಡಾವಣೆಯ ಅಹಮದ್ ನಗರ ಮೊಹಲ್ಲ ನಿವಾಸಿ, 6ನೇ ವಾರ್ಡ್ ಸದಸ್ಯ, ಎಸ್.ಡಿ.ಪಿ.ಐ ಜಿಲ್ಲಾ ಮಾಜಿ ಉಪಾಧ್ಯಕ್ಷ ಸಮೀವುಲ್ಲಾ ಖಾನ್ (48) ಮೃತರು. ಮೃತರು ಪತ್ನಿ ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಪ್ರಕರಣವೊಂದರ ಸಲುವಾಗಿ ನಗರದ ನ್ಯಾಯಾಲಯಕ್ಕೆ ಸಮೀವುಲ್ಲಾ ಖಾನ್ ಹಾಜರಾಗಿದ್ದರು. ಕಲಾಪ ಆರಂಭವಾಗುವ ಮುನ್ನ ನ್ಯಾಯಾಲಯದ ಆವರಣದಲ್ಲಿ ನಿಂತಿದ್ದ ಅವರು ಇದ್ದಕ್ಕಿದ್ದಂತೆ ತೀವ್ರ ಎದೆನೋವು ಎಂದು ಕುಸಿದು ಬಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ನಂತರ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಸಮೀವುಲ್ಲಾ ಅವರಿಗೆ ಹೃದಯ ಸಂಬಂಧಿ ರೋಗವಿದ್ದು ನಾಲ್ಕು ವರ್ಷಗಳ ಹಿಂದೆ ಆಂಜಿಯೋಪ್ಲ್ಯಾಸ್ಟ್ ಮಾಡಲಾಗಿತ್ತು ಎಂದು ತಿಳಿದುಬಂದಿದೆ.

Comments are closed.