ಮಂಗಳೂರು : ವಿಕಲಚೇತನರಿಗೆ ಹಾಗೂ ಅವರ ಕುಟುಂಬದವರು ಈ ಒಂದು ಕೋವಿಡ್ ಸಂದಿಗ್ದ ಪರಿಸ್ಥಿತಿಯಲ್ಲಿ ಬಹಳಷ್ಟು ನೊಂದಿದ್ದಾರೆ.
ಅವರು ಕಷ್ಟಪಟ್ಟು ಜೀವನ ನಡೆಸುತ್ತಿರುವ ಸಂದರ್ಭದಲ್ಲಿ ಕೊರೋನಾ ಮಹಾಮಾರಿಯಿಂದ ಅವರಿಗೆ ಮನೆಯಿಂದ ಹೊರಗೆ ಬರಲು ಅಸಾಧ್ಯವಾದ ಹಿನ್ನಲೆಯಲ್ಲಿ ಹಾಗೂ ಅವರಿಗೆ ಜೀವನ ನಡೆಸಲು ಹಾತೋರೆಯುವ ಸನ್ನಿವೇಶವನ್ನು ಅರಿತು ಮಾಜಿ ಶಾಸಕರಾದ ಜೆ. ಆರ್. ಲೋಬೊ ರವರು ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅವರಿಗೆ ಜೀವನ ಸಾಗಿಸಲು ದಿನ ಸಾಮಗ್ರಿಗಳ ಕಿಟ್ ಗಳನ್ನು ಒದಗಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲಿಂ, ರಂಜನ್ ಅತ್ತಾವರ, ಹೊನ್ನಯ್ಯ, ಟಿ. ಕೆ. ಸುಧೀರ್, ನೀರಜ್ ಪಾಲ್, ದುರ್ಗಾಪ್ರಸಾದ್, ರಮಾನಂದ ಪೂಜಾರಿ, ಉದಯ್ ಕುಂದರ್,ಪ್ರಕಾಶ್,ಆಸೀಫ್ ಜೆಪ್ಪು, ಸವಾನ್ ಎಸ್. ಕೆ.,ಜೀವನ್ ಮೋರೆ,ರೋಷನ್,ಯಶವಂತ ಪ್ರಭು,ಪ್ರವೀತ್ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.
Comments are closed.